ಸಾಹಿಬ್ಗಂಜ್, ಜಾರ್ಖಂಡ್:ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಹೋಲುವ ಮತ್ತೊಂದು ಪ್ರಕರಣ ಜಾರ್ಖಂಡ್ನಲ್ಲಿ ನಡೆದಿದೆ.
ಪತ್ನಿ ಕೊಂದು ದೇಹವನ್ನು 50 ತುಂಡುಗಳಾಗಿ ಕತ್ತರಿಸಿ, ಜಿಲ್ಲೆಯ ವಿವಿಧೆಡೆ ಬಿಸಾಡಿದ್ದ ಆರೋಪಿ ದಿಲ್ದಾರ್ ಅನ್ಸಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜಿಲ್ಲೆಯ ಬೋರಿಯಾ ಪ್ರದೇಶದಲ್ಲಿ ಸಂತ್ರಸ್ತೆಯ ದೇಹದ ಭಾಗಗಳನ್ನುನಾಯಿಗಳು ಎಳೆದೊಯ್ಯುತ್ತಿದ್ದನ್ನು ಗಮನಿಸಿದ ಸ್ಥಳೀಯ ನಿವಾಸಿಗಳುಪೊಲೀಸರಿಗೆ ಮಾಹಿತಿ ನೀಡಿದರು.
‘ಜಿಲ್ಲೆಯ ವಿವಿಧ ಪ್ರದೇಶಗಳಿಂದ ಕನಿಷ್ಟ ದೇಹದ 13 ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದವರು ದೊಂಡಾ ಪಹಾರ್ ನಿವಾಸಿ 22 ವರ್ಷದ ಮಹಿಳೆ. ಈಕೆ ದಿಲ್ದಾರ್ನ ಎರಡನೇ ಪತ್ನಿ ಎಂದು ತಿಳಿದು ಬಂದಿದೆ. ಈ ಹತ್ಯೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ’ ಎಂದು ಬೋರಿಯೊ ಪೊಲೀಸ್ ಠಾಣೆ ಅಧಿಕಾರಿ ಜಗನ್ನಾಥ್ ಪಾನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಾಹಿಬ್ಗಂಜ್ ಉಪ ವಿಭಾಗದ ಪೊಲೀಸ್ ಅಧಿಕಾರಿ ರಾಜೇಂದ್ರ ಕುಮಾರ್ ದುಬೆ, ಸಂತ್ರಸ್ತೆಯ ಕೆಲವು ದೇಹದ ಭಾಗಗಳು ಜಿಲ್ಲೆಯ ಪಾಳುಬಿದ್ದ ಮನೆಯಲ್ಲಿ ಪತ್ತೆಯಾಗಿವೆ.ಪ್ರಾಥಮಿಕ ತನಿಖೆ ನಂತರ, ಕೊಲೆಗೆ ಸಂಬಂಧಿಸಿದಂತೆ ಅನ್ಸಾರಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಸಮಗ್ರ ತನಿಖೆ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದು ಹೇಳಿದರು.