ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವನಂತಪುರಂ: ಡಿವೈಎಫ್‌ಐ ಇಬ್ಬರು ಕಾರ್ಯಕರ್ತರ ಹತ್ಯೆ

Last Updated 31 ಆಗಸ್ಟ್ 2020, 8:32 IST
ಅಕ್ಷರ ಗಾತ್ರ

ತಿರುವನಂತಪುರ:ಸಿಪಿಐ (ಎಂ)ನ ಯುವ ಘಟಕದ ಡಿವೈಎಫ್‌ಐನ ಇಬ್ಬರು ಕಾರ್ಯಕರ್ತರನ್ನು ಭಾನುವಾರ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ತಿರುವನಂತಪುರ ಜಿಲ್ಲೆಯತೆಂಬಮೂಡ್‌ನಲ್ಲಿ ಕಾರ್ಯಕರ್ತರಾದ ಮಿಥಿಲ್‌ರಾಜ್ ‌(30), ಹಖ್‌ ಮುಹಮ್ಮದ್‌(24) ಅವರ ಮೇಲೆಭಾನುವಾರ ರಾತ್ರಿ 11.30 ರಷ್ಟಕ್ಕೆ ಹರಿತವಾದ ಆಯುಧರಿಂದ ಹಲ್ಲೆ ಮಾಡಲಾಗಿದೆ.ಮಿಥಿಲ್‌ರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಹಖ್‌ ಮುಹಮ್ಮದ್‌ ಆಸ್ಪತ್ರೆಗೆ ಒಯ್ಯುವ ಮಾರ್ಗದಲ್ಲಿ ಸತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕೃತ್ಯದ ಸಂಬಂಧ ಮೂವರನ್ನು ಬಂಧಿಸಿಲಾಗಿದೆ. ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ನಡುವಿನ ದ್ವೇಷವೇ ಕೃತ್ಯಕ್ಕೆ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದ ಹಿನ್ನೆಲೆಯಲ್ಲಿ ಕೆಲಹೊತ್ತು ಉದ್ವಿಗ್ನದ ಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT