ಉತ್ತರಕಾಶಿ: ಇಲ್ಲಿನ ದ್ರೌಪದಿ ಕಾ ದಂಡ ಶಿಖರದಲ್ಲಿ ಈಚೆಗೆ ಹಿಮಪಾತ ಸಂಭವಿಸಿದ ಪರಿಣಾಮ ನಾಪತ್ತೆಯಾಗಿದ್ದವರ ಪೈಕಿ ಮತ್ತೆ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ನೆಹರೂ ಪರ್ವತಾರೋಹಣಸಂಸ್ಥೆ (ಎನ್ಐಎಂ) ಶುಕ್ರವಾರ ತಿಳಿಸಿದೆ.
ಭೂಸೇನೆಯ ಎರಡು ಚೀತಾ ಹೆಲಿಕಾಪ್ಟರ್ಗಳನ್ನು ಶೋಧ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಐಎಂ ಸಂಸ್ಥೆಯ ಪರ್ವತಾರೋಹಿಗಳ ತಂಡ ದ್ರೌಪದಿ ಕಾ ದಂಡ ಶಿಖರ ಏರಿ ಮರಳುತ್ತಿದ್ದಾಗ 17 ಸಾವಿರ ಅಡಿ ಎತ್ತರದಲ್ಲಿ ಹಿಮಪಾತ ಸಂಭವಿಸಿತ್ತು.