ನವದೆಹಲಿ:ಸಾಮಾಜಿಕ ಹೋರಾಟಗಾರನಾನಾಜಿ ದೇಶಮುಖ್ ಅವರ ಜನ್ಮ ದಿನಾಚರಣೆ ಅಂಗವಾಗಿಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಗೌರವ ಸಲ್ಲಿಸಿದ್ದಾರೆ. ನಾನಾಜಿ ದೇಶಮುಖ್ ಅವರಿಗೆ ಗ್ರಾಮೀಣಾಭಿವೃದ್ಧಿ ಮೇಲಿದ್ದ ಆಸಕ್ತಿ, ಉತ್ಸಾಹವನ್ನು ಅವರು ಸ್ಮರಿಸಿದ್ದಾರೆ.
ನಾನಾಜಿ ದೇಶಮುಖ್ ಅವರು1916ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು.
‘ನಾನಾಜಿ ಅವರು ತಮ್ಮ ಜೀವನವನ್ನು ದೇಶದ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಶೋಷಿತರ ಬಗ್ಗೆ ಅವರಿಗಿದ್ದ ಸಹಾನುಭೂತಿ ಮತ್ತು ಗ್ರಾಮೀಣಾಭಿವೃದ್ಧಿಯ ಬಗೆಗಿನ ಉತ್ಸಾಹ ಜನರಲ್ಲಿ ಸದಾ ಪ್ರೇರಣೆಯಾಗಿ ಉಳಿದಿರುತ್ತದೆ ಎಂದು ನಾಯ್ಡು ಅವರು ವರ್ಣಿಸಿದ್ದಾರೆ’ ಎಂದು ಉಪರಾಷ್ಟ್ರಪತಿ ಸಚಿವಾಲಯ ಟ್ವೀಟ್ ಮಾಡಿದೆ.