ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಜ.26ರ ಬಳಿಕ ‘ಹಾಥ್ಸೆ ಹಾಥ್’ ಬೃಹತ್ ಅಭಿಯಾನಕ್ಕೆ ನಿರ್ಧರಿಸಿದ್ದೇವೆ. ಇದು ಎರಡು ತಿಂಗಳ ಅಭಿಯಾನವಾಗಿದ್ದು, ಬ್ಲಾಕ್ ಮಟ್ಟದ ಪಾದಯಾತ್ರೆ ನಡೆಸಲಾಗುವುದು. ಈ ಅವಧಿಯಲ್ಲಿ ರಾಹುಲ್ ಗಾಂಧಿಯವರ ಜೋಡೊ ಯಾತ್ರೆ ಸಾಧನೆ ಮತ್ತು ಮೋದಿ ಸರ್ಕಾರದ ವೈಫಲ್ಯಗಳನ್ನು ಸಾರುತ್ತೇವೆ. ಈ ಯಾತ್ರೆಯಲ್ಲಿ ಯುವಕರತ್ತ ಗಮನಹರಿಸುತ್ತೇವೆ’ ಎಂದರು.