‘ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಮೂಲಕವೇ ಶಾಲೆಗಳಿಗೆ ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ ಪಡೆಯಬೇಕೆಂಬ ನಿಯಮ ಕಳೆದ ವರ್ಷವೇ ಇತ್ತು. ಅಧಿಕಾರಿಗಳ ಕಿರುಕುಳ, ಲಂಚಗುಳಿತನಕ್ಕೆ ಬೇಸತ್ತು ಸಾಕ್ಷ್ಯ ಸಮೇತ ದೂರು ನೀಡಿದ್ದೆವು. ಬಳಿಕ ಡಿಎಫ್ಒಗೆ ಇದ್ದ ಅಧಿಕಾರವನ್ನು ವಲಯ ಅಗ್ನಿಶಾಮಕ ಅಧಿಕಾರಿಗಳಿಗೆ (ಆರ್ಎಫ್ಒ) ವರ್ಗಾಯಿಸಲಾಗಿತ್ತು. ಇದು ಇನ್ನೂ ಕಷ್ಟಕರ ಆಗಿದ್ದರಿಂದ ಹೋರಾಟ ಮುಂದುವರಿಸಿದ್ದೆವು. ಹೀಗಾಗಿ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹೊಣೆ ನೀಡಿ ಆದೇಶನೀಡಲಾಗಿತ್ತು. ಆದರೆ, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಲಾಬಿಗೆ ಮಣಿದು ಒಂದೇ ದಿನದಲ್ಲಿ ಆದೇಶವನ್ನು ತಿದ್ದುಪಡಿಮಾಡಲಾಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.