ಹಾವೇರಿ ಹತ್ತಿರದ ದೇವಿಹೊಸುರು ಗ್ರಾಮದಲ್ಲಿ 1.10 ಎಕರೆ ಜಮೀನನ್ನು ಖರೀದಿಸಿ, ಕೃಷಿ ತರಬೇತಿ ಶಾಖೆಯನ್ನು ಪ್ರಾರಂಭಿಸಿ
ದರು.ನವಲಗುಂದ ಮತ್ತು ಶಿರಸಂಗಿ ಊರುಗಳಲ್ಲಿ ಕೆರೆಗಳನ್ನು ನಿರ್ಮಿಸಿ ಹೊಲಗಳಿಗೆ ನೀರುಣಿಸುವ ತಂತ್ರಜ್ಞಾನವನ್ನು ರೂಢಿಗೆ ತಂದರು.ವಿಜಯಪುರದಲ್ಲಿ ಸಹಕಾರ ತತ್ವದಡಿಯಲ್ಲಿ ಏಳೂರ ಗೌಡರ ದಲ್ಲಾಳಿ ಮಂಡಳಿಯನ್ನು ಸ್ಥಾಪಿಸಿದರು. ಕೃಷಿ, ಶಿಕ್ಷಣ, ಮಾರುಕಟ್ಟೆ, ಸಾಮಾಜಿಕ ಸುಧಾರಣೆ ಹೀಗೆ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಲಿಂಗರಾಜ ಅವರು ಆಧುನಿಕ ಕರ್ನಾಟಕದ ನಿರ್ಮಾಪಕರೆನಿಸಿಕೊಂಡರು.