<p><strong>ಬೆಂಗಳೂರು:</strong> ‘ವೃತ್ತಿ ರಂಗಭೂಮಿ ಕಲಾವಿದರಿಗೊಂದು ಬದುಕು ಕಟ್ಟಿಕೊಡಲು ಪತಿ ಸುಧೀರ್ ‘ಕರ್ನಾಟಕ ಕಲಾ ವೈಭವ ಸಂಘ’ ಎಂಬ ಕಂಪನಿ ಸ್ಥಾಪಿಸಿದರು. ಅವರ ನಿಧನದ ನಂತರ, ಈ ಕಂಪನಿ ಉಳಿಸಿಕೊಳ್ಳಲು ನನ್ನ ಕೈಲಿದ್ದ ಹಣವನ್ನೆಲ್ಲ ಕಳೆದುಕೊಳ್ಳಬೇಕಾಯಿತು. ಆದರೂ, ಛಲಬಿಡದೆ ಕಂಪನಿ ಕಟ್ಟಿ ಬೆಳೆಸಿದೆ..’</p>.<p>ವೃತ್ತಿ ರಂಗಭೂಮಿ ಹಿರಿಯ ನಟಿ ಮಾಲತಿ ಸುಧೀರ್ ತಮ್ಮ ಕಲಾ ಪಯಣದ ಬಗ್ಗೆ ಹೇಳಿಕೊಂಡಿದ್ದು ಹೀಗೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಲಾಸಂಘ ಸ್ಥಾಪಿಸಿ ಒಂದು ವರ್ಷದಲ್ಲಿಯೇ ಸುಧೀರ್ ನಮ್ಮನ್ನು ಅಗಲಿದರು. ಆಗ ಕಂಪನಿ ಉಳಿಸಿಕೊಳ್ಳಲು ನಾನು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಮನೆ, ನಿವೇಶನ, ಆಸ್ತಿ ಕಳೆದುಕೊಳ್ಳಬೇಕಾಯಿತು. ನಾಟಕ ಕಂಪನಿಯೊಂದನ್ನು ಮಹಿಳೆ ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ’ ಎನ್ನುತ್ತಾ ಅವರು ಭಾವುಕರಾದರು.</p>.<p><strong>ಜಿರಲೆಗೆ ಹೆದರುತ್ತಿದ್ದ ಸುಧೀರ್!</strong><br />ತೆರೆಯ ಮೇಲೆ ಖಳನಟನ ಪಾತ್ರದಲ್ಲಿ ಆರ್ಭಟಿಸುತ್ತಿದ್ದ ಸುಧೀರ್, ಜಿರಲೆ ಮತ್ತು ನಾಯಿಗೆ ತುಂಬಾ ಹೆದರುತ್ತಿದ್ದರು ಎಂಬ ಸ್ವಾರಸ್ಯಕರ ವಿಷಯವನ್ನು ಮಾಲತಿ ಹಂಚಿಕೊಂಡರು. ‘ಸುಧೀರ್ ಮುಗ್ಧ ಮನಸಿನವರಾಗಿದ್ದರು. ಅವರು ಎಂದೂ ಮದ್ಯಪಾನ ಮಾಡಿದವರಲ್ಲ. ಆದರೆ, ಕುಡುಕನ ಪಾತ್ರಗಳಲ್ಲಿಯೇ ಹೆಚ್ಚು ಗಮನ ಸೆಳೆದರು’ ಎಂದರು.</p>.<p><strong>ರಂಗಭೂಮಿ ಉಳಿವಿಗೆ ಶ್ರಮಿಸಬೇಕು:</strong>‘ವೃತ್ತಿರಂಗಭೂಮಿ ಕ್ಷೇತ್ರ ಇಂದು ಅಪಾಯದಲ್ಲಿದೆ. ಅಲ್ಲಿ ಬಹುತೇಕರು ವಿದ್ಯಾವಂತರಲ್ಲ. ಆದರೆ, ಬುದ್ಧಿವಂತರು. ಅವರಿಗೆ ಒಂದು ಬದುಕು ಕಲ್ಪಿಸಲು ಸರ್ಕಾರ ಹೊಸ ಕಾರ್ಯಕ್ರಮ ರೂಪಿಸಬೇಕು. ವೃತ್ತಿ ರಂಗಭೂಮಿ ಉಳಿಸಲು, ಹವ್ಯಾಸಿ ರಂಗಭೂಮಿಯೊಂದಿಗೆ ಸಂಬಂಧ ಬೆಸೆಯಬೇಕು’ ಎಂದು ಮಾಲತಿ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ವೃತ್ತಿ ರಂಗಭೂಮಿ ಕಲಾವಿದರಿಗೊಂದು ಬದುಕು ಕಟ್ಟಿಕೊಡಲು ಪತಿ ಸುಧೀರ್ ‘ಕರ್ನಾಟಕ ಕಲಾ ವೈಭವ ಸಂಘ’ ಎಂಬ ಕಂಪನಿ ಸ್ಥಾಪಿಸಿದರು. ಅವರ ನಿಧನದ ನಂತರ, ಈ ಕಂಪನಿ ಉಳಿಸಿಕೊಳ್ಳಲು ನನ್ನ ಕೈಲಿದ್ದ ಹಣವನ್ನೆಲ್ಲ ಕಳೆದುಕೊಳ್ಳಬೇಕಾಯಿತು. ಆದರೂ, ಛಲಬಿಡದೆ ಕಂಪನಿ ಕಟ್ಟಿ ಬೆಳೆಸಿದೆ..’</p>.<p>ವೃತ್ತಿ ರಂಗಭೂಮಿ ಹಿರಿಯ ನಟಿ ಮಾಲತಿ ಸುಧೀರ್ ತಮ್ಮ ಕಲಾ ಪಯಣದ ಬಗ್ಗೆ ಹೇಳಿಕೊಂಡಿದ್ದು ಹೀಗೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಲಾಸಂಘ ಸ್ಥಾಪಿಸಿ ಒಂದು ವರ್ಷದಲ್ಲಿಯೇ ಸುಧೀರ್ ನಮ್ಮನ್ನು ಅಗಲಿದರು. ಆಗ ಕಂಪನಿ ಉಳಿಸಿಕೊಳ್ಳಲು ನಾನು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಮನೆ, ನಿವೇಶನ, ಆಸ್ತಿ ಕಳೆದುಕೊಳ್ಳಬೇಕಾಯಿತು. ನಾಟಕ ಕಂಪನಿಯೊಂದನ್ನು ಮಹಿಳೆ ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ’ ಎನ್ನುತ್ತಾ ಅವರು ಭಾವುಕರಾದರು.</p>.<p><strong>ಜಿರಲೆಗೆ ಹೆದರುತ್ತಿದ್ದ ಸುಧೀರ್!</strong><br />ತೆರೆಯ ಮೇಲೆ ಖಳನಟನ ಪಾತ್ರದಲ್ಲಿ ಆರ್ಭಟಿಸುತ್ತಿದ್ದ ಸುಧೀರ್, ಜಿರಲೆ ಮತ್ತು ನಾಯಿಗೆ ತುಂಬಾ ಹೆದರುತ್ತಿದ್ದರು ಎಂಬ ಸ್ವಾರಸ್ಯಕರ ವಿಷಯವನ್ನು ಮಾಲತಿ ಹಂಚಿಕೊಂಡರು. ‘ಸುಧೀರ್ ಮುಗ್ಧ ಮನಸಿನವರಾಗಿದ್ದರು. ಅವರು ಎಂದೂ ಮದ್ಯಪಾನ ಮಾಡಿದವರಲ್ಲ. ಆದರೆ, ಕುಡುಕನ ಪಾತ್ರಗಳಲ್ಲಿಯೇ ಹೆಚ್ಚು ಗಮನ ಸೆಳೆದರು’ ಎಂದರು.</p>.<p><strong>ರಂಗಭೂಮಿ ಉಳಿವಿಗೆ ಶ್ರಮಿಸಬೇಕು:</strong>‘ವೃತ್ತಿರಂಗಭೂಮಿ ಕ್ಷೇತ್ರ ಇಂದು ಅಪಾಯದಲ್ಲಿದೆ. ಅಲ್ಲಿ ಬಹುತೇಕರು ವಿದ್ಯಾವಂತರಲ್ಲ. ಆದರೆ, ಬುದ್ಧಿವಂತರು. ಅವರಿಗೆ ಒಂದು ಬದುಕು ಕಲ್ಪಿಸಲು ಸರ್ಕಾರ ಹೊಸ ಕಾರ್ಯಕ್ರಮ ರೂಪಿಸಬೇಕು. ವೃತ್ತಿ ರಂಗಭೂಮಿ ಉಳಿಸಲು, ಹವ್ಯಾಸಿ ರಂಗಭೂಮಿಯೊಂದಿಗೆ ಸಂಬಂಧ ಬೆಸೆಯಬೇಕು’ ಎಂದು ಮಾಲತಿ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>