<p>ಇಲ್ಲಿ ಆಡಂಬರವಿಲ್ಲ; ಆದರವಿದೆ. ಶ್ರೀಮಂತಿಕೆಯಿಲ್ಲ ಸಂತಸವಿದೆ. ದುಬಾರಿ ದೇವದರ್ಶನದ ತಾಪವಿಲ್ಲ. ನಿತ್ಯನೋಟದ ಶಾಂತಿ ಇದೆ. ಈ ಇರುವುದನ್ನು ಲೆಕ್ಕಹಾಕುತ್ತ ಹೋದರೆ ಅದು ಬೆಟ್ಟವಾಗುತ್ತದೆ.<br /> <br /> ಇಂತಹ ಮಾತನ್ನು ಕೇಳುವಾಗಲೇ ರೋಮಾಂಚನ! ಇದನ್ನು ಪ್ರತ್ಯಕ್ಷ ಕಂಡರೆ? ದೈನಂದಿನ ಜಂಜಡ, ಮಾನಸಿಕ ತುಮುಲಗಳಿಂದ ಮುಕ್ತಿ ಪಡೆಯಬಯಸಿದರೆ ನೇರ ಕಾಕೋಳಿಗೆ ಬನ್ನಿ. ಇಲ್ಲಿನ ವಿಶಿಷ್ಟ ದೇವಾಲಯವೊಂದು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. <br /> <br /> ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಐತಿಹಾಸಿಕ ಪ್ರೇಕ್ಷಣೀಯ ನೆಲೆಯಾಗಿರುವ ಕಾಕೋಳು ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ.<br /> <br /> ಆಧುನಿಕತೆಯ ಮಿಂಚಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಗ್ರಾಮದ ಮಧ್ಯಭಾಗದಲ್ಲಿರುವ ದಾಸಸಾಹಿತ್ಯದ ಆದ್ಯಪ್ರವರ್ತಕ ಶ್ರೀಪಾದರಾಜರು ಪ್ರತಿಷ್ಠಾಪಿಸಿದ ಆಳೆತ್ತರದ ಅನನ್ಯವಾದ ಬೃಂದಾವನದ ಚತುರ್ಭುಜ ವೇಣುಗೋಪಾಲಕೃಷ್ಣ ಮತ್ತು ವ್ಯಾಸರಾಜ ಸ್ಥಾಪಿತ ಕಂಬದ ಆಂಜನೇಯನ ಗುಡಿ ಇಲ್ಲಿನ ಪ್ರಮುಖ ಆಕರ್ಷಣೆ .<br /> <br /> ಕಾಕೋಳು ತೇರು - ವೇಣುಗೋಪಾಲನ ವೈಭವದ ಮೇರು <br /> ಮೂಲವಿಗ್ರಹಗಳ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ. ಮಾರ್ಚ್ 25ರಿಂದ 28ರವರೆಗೆ ಇದು ನಡೆಯಲಿದೆ. ರಥೋತ್ಸವ ದೈವಭಕ್ತಿಯ ಅನನ್ಯತೆಯನ್ನು, ಅಸ್ಮಿತೆಯನ್ನು ಬಿಂಬಿಸುವ ಒಂದು ವಿಶಿಷ್ಟರೂಪಕ. <br /> <br /> ಪ್ರತಿವರ್ಷ ಚೈತ್ರಮಾಸದ ಶುದ್ಧ ತೃತೀಯದಿಂದ ರಾಮನವಮಿ ಪರ್ಯಂತ ಅತಿ ವಿಜೃಂಭಣೆಯಿಂದ ಕಣ್ಮನಗಳಿಗೆ ಹಬ್ಬವನ್ನುಂಟುಮಾಡುವ ಈ ಪರಂಪರೆ 78 ವಸಂತಗಳನ್ನು ಪೂರೈಸಿದೆ. ಇದು 79ನೇ ಬ್ರಹ್ಮರಥೋತ್ಸವ. <br /> <br /> <strong>ಕಾಕೋಳು ತಲುಪುವುದು ಹೇಗೆ? </strong><br /> ಬೆಂಗಳೂರಿಂದ 285ಇ, 251ಎ ಮತ್ತು 266ಸಿ, 285ಎಲ್ , 285ಆರ್, 285ಎಂ, 285ಕ್ಯೂ ಬಸ್ಸುಗಳು ಕಾಕೋಳಿಗೆ ಬರುತ್ತದೆ. ಮಾಹಿತಿಗೆ 90356 18076/ 92415 00335.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಲ್ಲಿ ಆಡಂಬರವಿಲ್ಲ; ಆದರವಿದೆ. ಶ್ರೀಮಂತಿಕೆಯಿಲ್ಲ ಸಂತಸವಿದೆ. ದುಬಾರಿ ದೇವದರ್ಶನದ ತಾಪವಿಲ್ಲ. ನಿತ್ಯನೋಟದ ಶಾಂತಿ ಇದೆ. ಈ ಇರುವುದನ್ನು ಲೆಕ್ಕಹಾಕುತ್ತ ಹೋದರೆ ಅದು ಬೆಟ್ಟವಾಗುತ್ತದೆ.<br /> <br /> ಇಂತಹ ಮಾತನ್ನು ಕೇಳುವಾಗಲೇ ರೋಮಾಂಚನ! ಇದನ್ನು ಪ್ರತ್ಯಕ್ಷ ಕಂಡರೆ? ದೈನಂದಿನ ಜಂಜಡ, ಮಾನಸಿಕ ತುಮುಲಗಳಿಂದ ಮುಕ್ತಿ ಪಡೆಯಬಯಸಿದರೆ ನೇರ ಕಾಕೋಳಿಗೆ ಬನ್ನಿ. ಇಲ್ಲಿನ ವಿಶಿಷ್ಟ ದೇವಾಲಯವೊಂದು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. <br /> <br /> ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಐತಿಹಾಸಿಕ ಪ್ರೇಕ್ಷಣೀಯ ನೆಲೆಯಾಗಿರುವ ಕಾಕೋಳು ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ.<br /> <br /> ಆಧುನಿಕತೆಯ ಮಿಂಚಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಗ್ರಾಮದ ಮಧ್ಯಭಾಗದಲ್ಲಿರುವ ದಾಸಸಾಹಿತ್ಯದ ಆದ್ಯಪ್ರವರ್ತಕ ಶ್ರೀಪಾದರಾಜರು ಪ್ರತಿಷ್ಠಾಪಿಸಿದ ಆಳೆತ್ತರದ ಅನನ್ಯವಾದ ಬೃಂದಾವನದ ಚತುರ್ಭುಜ ವೇಣುಗೋಪಾಲಕೃಷ್ಣ ಮತ್ತು ವ್ಯಾಸರಾಜ ಸ್ಥಾಪಿತ ಕಂಬದ ಆಂಜನೇಯನ ಗುಡಿ ಇಲ್ಲಿನ ಪ್ರಮುಖ ಆಕರ್ಷಣೆ .<br /> <br /> ಕಾಕೋಳು ತೇರು - ವೇಣುಗೋಪಾಲನ ವೈಭವದ ಮೇರು <br /> ಮೂಲವಿಗ್ರಹಗಳ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ. ಮಾರ್ಚ್ 25ರಿಂದ 28ರವರೆಗೆ ಇದು ನಡೆಯಲಿದೆ. ರಥೋತ್ಸವ ದೈವಭಕ್ತಿಯ ಅನನ್ಯತೆಯನ್ನು, ಅಸ್ಮಿತೆಯನ್ನು ಬಿಂಬಿಸುವ ಒಂದು ವಿಶಿಷ್ಟರೂಪಕ. <br /> <br /> ಪ್ರತಿವರ್ಷ ಚೈತ್ರಮಾಸದ ಶುದ್ಧ ತೃತೀಯದಿಂದ ರಾಮನವಮಿ ಪರ್ಯಂತ ಅತಿ ವಿಜೃಂಭಣೆಯಿಂದ ಕಣ್ಮನಗಳಿಗೆ ಹಬ್ಬವನ್ನುಂಟುಮಾಡುವ ಈ ಪರಂಪರೆ 78 ವಸಂತಗಳನ್ನು ಪೂರೈಸಿದೆ. ಇದು 79ನೇ ಬ್ರಹ್ಮರಥೋತ್ಸವ. <br /> <br /> <strong>ಕಾಕೋಳು ತಲುಪುವುದು ಹೇಗೆ? </strong><br /> ಬೆಂಗಳೂರಿಂದ 285ಇ, 251ಎ ಮತ್ತು 266ಸಿ, 285ಎಲ್ , 285ಆರ್, 285ಎಂ, 285ಕ್ಯೂ ಬಸ್ಸುಗಳು ಕಾಕೋಳಿಗೆ ಬರುತ್ತದೆ. ಮಾಹಿತಿಗೆ 90356 18076/ 92415 00335.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>