<p>‘ದೂರದರ್ಶನ ಇರುವವರೆಗೂ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಅವಕಾಶ ಇದ್ದೇ ಇರುತ್ತದೆ ಎಂಬ ನಂಬಿಕೆ ಇತ್ತು. ಯಾಕೆಂದರೆ ಚಂದನ ವಾಹಿನಿಯಲ್ಲಿ ಮಾತ್ರ ಇಂತಹ ಗಂಭೀರ ಮತ್ತು ಮಹತ್ವದ ಕಾರ್ಯಕ್ರಮ ಪ್ರಸಾರವಾಗಲು ಸಾಧ್ಯ’ ಎನ್ನುತ್ತಲೇ ಮಾತಿಗಿಳಿದರು ಚಂದನ್ ಗೌಡ.<br /> <br /> ಚಂದನ್ ಗೌಡ ಪ್ರತಿ ಭಾನುವಾರ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುತ್ತಿರುವ ‘ಸಾಹಿತ್ಯ ಸಂಜೆ’ ಸರಣಿ ಕಾರ್ಯಕ್ರಮದ ನಿರ್ದೇಶಕ. ಕನ್ನಡದಲ್ಲಿನ ತಮ್ಮ ಹಿರಿಯ ಮತ್ತು ಸಮಕಾಲೀನ ಲೇಖಕರ ಕುರಿತು ಯು.ಆರ್. ಅನಂತಮೂರ್ತಿ ನೀಡಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಮಾಹಿತಿಯನ್ನು ಅವರು ‘ಮೆಟ್ರೊ’ದೊಂದಿಗೆ ಹಂಚಿಕೊಂಡರು.<br /> <br /> ಸಾಹಿತ್ಯ ಸಂಜೆ ಪರಿಕಲ್ಪನೆಯು ಕೂತು ತುಂಬ ಯೋಚಿಸಿ ಯೋಜಿಸಿ ಬಂದಿದ್ದಲ್ಲವಂತೆ. ಅಕಸ್ಮಾತ್ ಹೊಳೆದ ವಿಚಾರವನ್ನು ತಾವು ಸಮಾಜಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಕುಲಪತಿಯೊಂದಿಗೆ ಹಂಚಿಕೊಂಡಾಗ ವಿಶ್ವವಿದ್ಯಾಲಯವು ಕಾರ್ಯಕ್ರಮ ನಿರ್ಮಾಣಕ್ಕೆ ಮುಂದಾಗಿದ್ದರ ಪರಿಣಾಮವಾಗಿ ಈ ಕಾರ್ಯಕ್ರಮ ರೂಪುಗೊಂಡಿತಂತೆ.<br /> <br /> ‘ಇಲ್ಲಿ ಅನಂತಮೂರ್ತಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಂತೆ ಮಾತನಾಡಿಲ್ಲ. ನಿರ್ದಿಷ್ಟ ಲೇಖಕರ ಸಾಹಿತ್ಯ ಗುಣ, ಭಿನ್ನತೆ, ಸಾಹಿತ್ಯ ಜಗತ್ತಿನಲ್ಲಿ ಅವರ ಸ್ಥಾನ, ಹೀಗೆ ತುಂಬ ಕ್ರಿಯಾತ್ಮಕವಾಗಿ ಮಾತನಾಡುತ್ತಾ ಹೋಗಿದ್ದಾರೆ’ ಎಂದು ಚಂದನ್ ವಿವರಿಸಿದರು.<br /> ‘ಇಂದಿನ ತಲೆಮಾರಿನವರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಸಾಹಿತ್ಯ ಸಹವಾಸದಂತಹ ಕಾರ್ಯಕ್ರಮಗಳು ಸಾಹಿತ್ಯ ಸಂಪ್ರದಾಯದ ಬಗ್ಗೆ ಅವರಲ್ಲಿ ಕುತೂಹಲ ಹುಟ್ಟಿಸುತ್ತವೆ.<br /> <br /> ಇದೊಂದು ರೀತಿಯಲ್ಲಿ ತಮ್ಮ ಹಿರಿಯರೊಂದಿಗೆ ಮತ್ತು ಸಮಕಾಲೀನ ಲೇಖಕರೊಂದಿಗೆ ಅನಂತಮೂರ್ತಿ ಅವರ ಸಂಬಂಧ ಯಾವ ರೀತಿ ಇತ್ತು ಎನ್ನುವುದರ ದಾಖಲೆಯೂ ಹೌದು. ಅವರ ವಿಶಿಷ್ಟ ಮಾತಿನ ಶೈಲಿಯನ್ನು ವೀಕ್ಷಿಸುವುದೇ ಒಂದು ಸಂಭ್ರಮ’ ಎಂದು ಕಾರ್ಯಕ್ರಮದ ಹಿಂದಿನ ಉದ್ದೇಶಗಳನ್ನು ಅವರು ತಿಳಿಸುತ್ತಾರೆ.<br /> <br /> ಈ ಉಪನ್ಯಾಸಗಳನ್ನು ಎರಡು ವರ್ಷಗಳ ಹಿಂದೆಯೇ ಚಿತ್ರೀಕರಿಸಲಾಗಿತ್ತಂತೆ. 2012ರ ಏಪ್ರಿಲ್ನಿಂದ ಜುಲೈವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿ ವಾರ ಅನಂತಮೂರ್ತಿ ಅವರ ಮನೆಗೇ ಹೋಗಿ ಈ ಉಪನ್ಯಾಸಗಳನ್ನು ಚಿತ್ರೀಕರಿಸಿದ್ದಂತೆ. ‘ಆದರೆ ಕೆಲವು ತಾಂತ್ರಿಕ ಕೊರತೆಗಳಿಂದ ಈ ಕಾರ್ಯಕ್ರಮ ಪ್ರಸಾರವಾಗಲು ತಡವಾಯಿತು’ ಎಂದರು ಚಂದನ್.<br /> <br /> ಕೇಬಲ್ ಸಂಪರ್ಕ ಇಲ್ಲದಿದ್ದವರೂ ನೋಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಸರಣಿ ಕಾರ್ಯಕ್ರಮವನ್ನು ‘ಚಂದನ’ ವಾಹಿನಿಯಲ್ಲೇ ಪ್ರಸಾರ ಮಾಡಲು ನಿರ್ಧರಿಸಿದರು. 58 ನಿಮಿಷಗಳ ಈ ಕಾರ್ಯಕ್ರಮದ ನಡುವೆ ಒಂದೂ ಜಾಹೀರಾತು ಇಲ್ಲ. ಶೀರ್ಷಿಕೆ ಗೀತೆಯ ಹೊರತಾಗಿ ಸಂಗೀತವನ್ನೂ ಹಾಕಿಲ್ಲ.<br /> <br /> ‘ಕೆ.ಜಿ. ಸೋಮಶೇಖರ್ ಅವರು ತೆಗೆದಿರುವ ಅಪರೂಪದ ಕಪ್ಪು-, ಬಿಳುಪು ಚಿತ್ರಗಳನ್ನು ಬಳಸಿದ್ದೇವೆ. ತೇಜಸ್ವಿ ಕುರಿತ ಉಪನ್ಯಾಸದಲ್ಲಿ ಅವರ ಹೆಂಡತಿ ತೆಗೆದ ಕೆಲವು ಫೋಟೊಗಳನ್ನು ಬಳಸಿಕೊಂಡಿದ್ದೇವೆ. ಲಂಕೇಶ್ ಕುರಿತ ಉಪನ್ಯಾಸದಲ್ಲಿ ಅವರ ಮಗಳು ನೀಡಿದ ಫೋಟೊಗಳನ್ನು ಬಳಸಿಕೊಂಡಿದ್ದೇವೆ. ಹೀಗೆ ಉದ್ದೇಶಪೂರ್ವಕವಾಗಿಯೇ ಸಾಕ್ಷ್ಯಚಿತ್ರದ ಜನಪ್ರಿಯ ಮಾದರಿಯನ್ನು ಬಿಟ್ಟು ವಿಭಿನ್ನವಾಗಿ ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ’ ಎಂದು ಚಂದನ್ ತಮ್ಮ ಕಾರ್ಯಕ್ರಮದ ವಿಶೇಷವನ್ನು ಬಿಚ್ಚಿಟ್ಟರು.<br /> <br /> ಈ ಕಾರ್ಯಕ್ರಮವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ರೂಪಿಸಲಾಗಿದೆಯಂತೆ. ‘ಗಾಯಕಿ ಎಂ. ಡಿ. ಪಲ್ಲವಿ, ಛಾಯಾಗ್ರಾಹಕ ಕೆ.ಜಿ. ಸೋಮಶೇಖರ್, ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್, ಸಂಕಲನಕಾರ, ಕ್ಯಾಮೆರಾಮನ್ ಎಲ್ಲರೂ ಕಡಿಮೆ ಸಂಭಾವನೆಗೆ ಕೆಲಸ ಮಾಡಿಕೊಟ್ಟಿದ್ದಾರೆ. ಇದರಿಂದ ಸಾಹಿತ್ಯ ಸಹವಾಸವನ್ನು ಸುಮಾರು 3 ಲಕ್ಷ ರೂಪಾಯಿಗಳಲ್ಲಿ ಮುಗಿಸಲು ಸಾಧ್ಯವಾಗಿದೆ’ ಎಂದು ಸ್ಮರಿಸುತ್ತಾರೆ.<br /> <br /> ಇದನ್ನೊಂದು ಶಾಶ್ವತ ದಾಖಲೆಯನ್ನಾಗಿ ಉಳಿಸಿಕೊಂಡು ಮುಂದಿನ ತಲೆಮಾರಿಗೂ ಸಿಗುವಂತೆ ಮಾಡಲು ಡಿವಿಡಿ ರೂಪದಲ್ಲಿಯೂ ತರಲಾಗುತ್ತದಂತೆ. ಕಾರ್ಯಕ್ರಮ ಸರಣಿ ಪ್ರಸಾರವಾದ ಎರಡು ತಿಂಗಳ ಒಳಗಾಗಿ ಸಾಹಿತ್ಯ ಸಹವಾಸ ಡಿವಿಡಿಗಳು ಲಭ್ಯವಾಗಲಿವೆ.<br /> ಬೇಂದ್ರೆ ಅವರನ್ನು ಕೇಂದ್ರೀಕರಿಸಿ ಆರಂಭಗೊಂಡ ಈ ಸರಣಿ ಉಪನ್ಯಾಸದ ಮೂರು ಕಂತುಗಳು ಈಗಾಗಲೇ ಮುಗಿದಿವೆ. ಎರಡು ಮತ್ತು ಮೂರನೇ ಸಂಚಿಕೆಯಲ್ಲಿ ಕುವೆಂಪು ಮತ್ತು ಕಾರಂತರ ಬಗ್ಗೆ ಉಪನ್ಯಾಸಗಳು ಪ್ರಸಾರವಾಗಿವೆ. ಮುಂದಿನ ಉಪನ್ಯಾಸಗಳ ವಿವರ ಹೀಗಿವೆ.<br /> <br /> <strong>ಜೂನ್ 29 – ಗೋಪಾಲಕೃಷ್ಣ ಅಡಿಗ</strong></p>.<p><strong>ಜುಲೈ 6 – ಪೂರ್ಣಚಂದ್ರ ತೇಜಸ್ವಿ ಮತ್ತು ಪಿ. ಲಂಕೇಶ್<br /> ಜುಲೈ 13 – ಭಾಗ 1. ಮಾಸ್ತಿ ವೆಂಕಟೇಶ್ ಅಯ್ಯಂಗಾರ್,<br /> ಭಾಗ 2. ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ್, ಎ.ಕೆ ರಾಮಾನುಜಂ<br /> ಜುಲೈ 20 – ನವ್ಯ ಸಾಹಿತ್ಯ<br /> ಜುಲೈ 27 – ಭಾಗ 1. ದಲಿತ ಸಾಹಿತ್ಯ, ಭಾಗ 2. ಕನ್ನಡ ಭಾಷೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ದೂರದರ್ಶನ ಇರುವವರೆಗೂ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಅವಕಾಶ ಇದ್ದೇ ಇರುತ್ತದೆ ಎಂಬ ನಂಬಿಕೆ ಇತ್ತು. ಯಾಕೆಂದರೆ ಚಂದನ ವಾಹಿನಿಯಲ್ಲಿ ಮಾತ್ರ ಇಂತಹ ಗಂಭೀರ ಮತ್ತು ಮಹತ್ವದ ಕಾರ್ಯಕ್ರಮ ಪ್ರಸಾರವಾಗಲು ಸಾಧ್ಯ’ ಎನ್ನುತ್ತಲೇ ಮಾತಿಗಿಳಿದರು ಚಂದನ್ ಗೌಡ.<br /> <br /> ಚಂದನ್ ಗೌಡ ಪ್ರತಿ ಭಾನುವಾರ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುತ್ತಿರುವ ‘ಸಾಹಿತ್ಯ ಸಂಜೆ’ ಸರಣಿ ಕಾರ್ಯಕ್ರಮದ ನಿರ್ದೇಶಕ. ಕನ್ನಡದಲ್ಲಿನ ತಮ್ಮ ಹಿರಿಯ ಮತ್ತು ಸಮಕಾಲೀನ ಲೇಖಕರ ಕುರಿತು ಯು.ಆರ್. ಅನಂತಮೂರ್ತಿ ನೀಡಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಮಾಹಿತಿಯನ್ನು ಅವರು ‘ಮೆಟ್ರೊ’ದೊಂದಿಗೆ ಹಂಚಿಕೊಂಡರು.<br /> <br /> ಸಾಹಿತ್ಯ ಸಂಜೆ ಪರಿಕಲ್ಪನೆಯು ಕೂತು ತುಂಬ ಯೋಚಿಸಿ ಯೋಜಿಸಿ ಬಂದಿದ್ದಲ್ಲವಂತೆ. ಅಕಸ್ಮಾತ್ ಹೊಳೆದ ವಿಚಾರವನ್ನು ತಾವು ಸಮಾಜಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಕುಲಪತಿಯೊಂದಿಗೆ ಹಂಚಿಕೊಂಡಾಗ ವಿಶ್ವವಿದ್ಯಾಲಯವು ಕಾರ್ಯಕ್ರಮ ನಿರ್ಮಾಣಕ್ಕೆ ಮುಂದಾಗಿದ್ದರ ಪರಿಣಾಮವಾಗಿ ಈ ಕಾರ್ಯಕ್ರಮ ರೂಪುಗೊಂಡಿತಂತೆ.<br /> <br /> ‘ಇಲ್ಲಿ ಅನಂತಮೂರ್ತಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಂತೆ ಮಾತನಾಡಿಲ್ಲ. ನಿರ್ದಿಷ್ಟ ಲೇಖಕರ ಸಾಹಿತ್ಯ ಗುಣ, ಭಿನ್ನತೆ, ಸಾಹಿತ್ಯ ಜಗತ್ತಿನಲ್ಲಿ ಅವರ ಸ್ಥಾನ, ಹೀಗೆ ತುಂಬ ಕ್ರಿಯಾತ್ಮಕವಾಗಿ ಮಾತನಾಡುತ್ತಾ ಹೋಗಿದ್ದಾರೆ’ ಎಂದು ಚಂದನ್ ವಿವರಿಸಿದರು.<br /> ‘ಇಂದಿನ ತಲೆಮಾರಿನವರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಸಾಹಿತ್ಯ ಸಹವಾಸದಂತಹ ಕಾರ್ಯಕ್ರಮಗಳು ಸಾಹಿತ್ಯ ಸಂಪ್ರದಾಯದ ಬಗ್ಗೆ ಅವರಲ್ಲಿ ಕುತೂಹಲ ಹುಟ್ಟಿಸುತ್ತವೆ.<br /> <br /> ಇದೊಂದು ರೀತಿಯಲ್ಲಿ ತಮ್ಮ ಹಿರಿಯರೊಂದಿಗೆ ಮತ್ತು ಸಮಕಾಲೀನ ಲೇಖಕರೊಂದಿಗೆ ಅನಂತಮೂರ್ತಿ ಅವರ ಸಂಬಂಧ ಯಾವ ರೀತಿ ಇತ್ತು ಎನ್ನುವುದರ ದಾಖಲೆಯೂ ಹೌದು. ಅವರ ವಿಶಿಷ್ಟ ಮಾತಿನ ಶೈಲಿಯನ್ನು ವೀಕ್ಷಿಸುವುದೇ ಒಂದು ಸಂಭ್ರಮ’ ಎಂದು ಕಾರ್ಯಕ್ರಮದ ಹಿಂದಿನ ಉದ್ದೇಶಗಳನ್ನು ಅವರು ತಿಳಿಸುತ್ತಾರೆ.<br /> <br /> ಈ ಉಪನ್ಯಾಸಗಳನ್ನು ಎರಡು ವರ್ಷಗಳ ಹಿಂದೆಯೇ ಚಿತ್ರೀಕರಿಸಲಾಗಿತ್ತಂತೆ. 2012ರ ಏಪ್ರಿಲ್ನಿಂದ ಜುಲೈವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿ ವಾರ ಅನಂತಮೂರ್ತಿ ಅವರ ಮನೆಗೇ ಹೋಗಿ ಈ ಉಪನ್ಯಾಸಗಳನ್ನು ಚಿತ್ರೀಕರಿಸಿದ್ದಂತೆ. ‘ಆದರೆ ಕೆಲವು ತಾಂತ್ರಿಕ ಕೊರತೆಗಳಿಂದ ಈ ಕಾರ್ಯಕ್ರಮ ಪ್ರಸಾರವಾಗಲು ತಡವಾಯಿತು’ ಎಂದರು ಚಂದನ್.<br /> <br /> ಕೇಬಲ್ ಸಂಪರ್ಕ ಇಲ್ಲದಿದ್ದವರೂ ನೋಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಸರಣಿ ಕಾರ್ಯಕ್ರಮವನ್ನು ‘ಚಂದನ’ ವಾಹಿನಿಯಲ್ಲೇ ಪ್ರಸಾರ ಮಾಡಲು ನಿರ್ಧರಿಸಿದರು. 58 ನಿಮಿಷಗಳ ಈ ಕಾರ್ಯಕ್ರಮದ ನಡುವೆ ಒಂದೂ ಜಾಹೀರಾತು ಇಲ್ಲ. ಶೀರ್ಷಿಕೆ ಗೀತೆಯ ಹೊರತಾಗಿ ಸಂಗೀತವನ್ನೂ ಹಾಕಿಲ್ಲ.<br /> <br /> ‘ಕೆ.ಜಿ. ಸೋಮಶೇಖರ್ ಅವರು ತೆಗೆದಿರುವ ಅಪರೂಪದ ಕಪ್ಪು-, ಬಿಳುಪು ಚಿತ್ರಗಳನ್ನು ಬಳಸಿದ್ದೇವೆ. ತೇಜಸ್ವಿ ಕುರಿತ ಉಪನ್ಯಾಸದಲ್ಲಿ ಅವರ ಹೆಂಡತಿ ತೆಗೆದ ಕೆಲವು ಫೋಟೊಗಳನ್ನು ಬಳಸಿಕೊಂಡಿದ್ದೇವೆ. ಲಂಕೇಶ್ ಕುರಿತ ಉಪನ್ಯಾಸದಲ್ಲಿ ಅವರ ಮಗಳು ನೀಡಿದ ಫೋಟೊಗಳನ್ನು ಬಳಸಿಕೊಂಡಿದ್ದೇವೆ. ಹೀಗೆ ಉದ್ದೇಶಪೂರ್ವಕವಾಗಿಯೇ ಸಾಕ್ಷ್ಯಚಿತ್ರದ ಜನಪ್ರಿಯ ಮಾದರಿಯನ್ನು ಬಿಟ್ಟು ವಿಭಿನ್ನವಾಗಿ ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ’ ಎಂದು ಚಂದನ್ ತಮ್ಮ ಕಾರ್ಯಕ್ರಮದ ವಿಶೇಷವನ್ನು ಬಿಚ್ಚಿಟ್ಟರು.<br /> <br /> ಈ ಕಾರ್ಯಕ್ರಮವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ರೂಪಿಸಲಾಗಿದೆಯಂತೆ. ‘ಗಾಯಕಿ ಎಂ. ಡಿ. ಪಲ್ಲವಿ, ಛಾಯಾಗ್ರಾಹಕ ಕೆ.ಜಿ. ಸೋಮಶೇಖರ್, ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್, ಸಂಕಲನಕಾರ, ಕ್ಯಾಮೆರಾಮನ್ ಎಲ್ಲರೂ ಕಡಿಮೆ ಸಂಭಾವನೆಗೆ ಕೆಲಸ ಮಾಡಿಕೊಟ್ಟಿದ್ದಾರೆ. ಇದರಿಂದ ಸಾಹಿತ್ಯ ಸಹವಾಸವನ್ನು ಸುಮಾರು 3 ಲಕ್ಷ ರೂಪಾಯಿಗಳಲ್ಲಿ ಮುಗಿಸಲು ಸಾಧ್ಯವಾಗಿದೆ’ ಎಂದು ಸ್ಮರಿಸುತ್ತಾರೆ.<br /> <br /> ಇದನ್ನೊಂದು ಶಾಶ್ವತ ದಾಖಲೆಯನ್ನಾಗಿ ಉಳಿಸಿಕೊಂಡು ಮುಂದಿನ ತಲೆಮಾರಿಗೂ ಸಿಗುವಂತೆ ಮಾಡಲು ಡಿವಿಡಿ ರೂಪದಲ್ಲಿಯೂ ತರಲಾಗುತ್ತದಂತೆ. ಕಾರ್ಯಕ್ರಮ ಸರಣಿ ಪ್ರಸಾರವಾದ ಎರಡು ತಿಂಗಳ ಒಳಗಾಗಿ ಸಾಹಿತ್ಯ ಸಹವಾಸ ಡಿವಿಡಿಗಳು ಲಭ್ಯವಾಗಲಿವೆ.<br /> ಬೇಂದ್ರೆ ಅವರನ್ನು ಕೇಂದ್ರೀಕರಿಸಿ ಆರಂಭಗೊಂಡ ಈ ಸರಣಿ ಉಪನ್ಯಾಸದ ಮೂರು ಕಂತುಗಳು ಈಗಾಗಲೇ ಮುಗಿದಿವೆ. ಎರಡು ಮತ್ತು ಮೂರನೇ ಸಂಚಿಕೆಯಲ್ಲಿ ಕುವೆಂಪು ಮತ್ತು ಕಾರಂತರ ಬಗ್ಗೆ ಉಪನ್ಯಾಸಗಳು ಪ್ರಸಾರವಾಗಿವೆ. ಮುಂದಿನ ಉಪನ್ಯಾಸಗಳ ವಿವರ ಹೀಗಿವೆ.<br /> <br /> <strong>ಜೂನ್ 29 – ಗೋಪಾಲಕೃಷ್ಣ ಅಡಿಗ</strong></p>.<p><strong>ಜುಲೈ 6 – ಪೂರ್ಣಚಂದ್ರ ತೇಜಸ್ವಿ ಮತ್ತು ಪಿ. ಲಂಕೇಶ್<br /> ಜುಲೈ 13 – ಭಾಗ 1. ಮಾಸ್ತಿ ವೆಂಕಟೇಶ್ ಅಯ್ಯಂಗಾರ್,<br /> ಭಾಗ 2. ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ್, ಎ.ಕೆ ರಾಮಾನುಜಂ<br /> ಜುಲೈ 20 – ನವ್ಯ ಸಾಹಿತ್ಯ<br /> ಜುಲೈ 27 – ಭಾಗ 1. ದಲಿತ ಸಾಹಿತ್ಯ, ಭಾಗ 2. ಕನ್ನಡ ಭಾಷೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>