ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯರ ಮಧ್ಯಾರಾಧನಾ ಮಹೋತ್ಸವದಲ್ಲಿ

Last Updated 14 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿ: ಬೆಳಿಗ್ಗೆ 7.30 ವಿಶೇಷ ಫಲ ಪಂಚಾಮೃತಾಭಿಷೇಕ. ಸಂಜೆ 7ಕ್ಕೆ ಶಂಕರ್ ಶಾನುಬೋಗ್ ಅವರಿಂದ ಭಕ್ತಿಗೀತೆಗಳು.ಸ್ಥಳ: 1106, 6ನೇ ಮುಖ್ಯ ರಸ್ತೆ, ಪ್ರಕಾಶ ನಗರ. ಸಂಜೆ 6.

ದೇವಗಿರಿ ಶ್ರೀ ಗುರುಸೇವಾ ಸಮಿತಿ: ಆರಾಧನಾ ಮಹೋತ್ಸವ  ಪ್ರಯುಕ್ತ ಸೋಮವಾರ ತೇಜಸ್ವಿ ರಘುನಾಥ್ ಅವರಿಂದ ವೇಣು ವಾದನ.
ಸ್ಥಳ: 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.

ಶ್ರೀ ರಾಘವೇಂದ್ರ ಸೇವಾ ಸಮಿತಿ: ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 340ನೇ ಆರಾಧನಾ ಮಹೋತ್ಸವ ಮತ್ತು ಶ್ರೀಕೃಷ್ಣ ಜಯಂತಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ. ಸಂಜೆ 6.30ಕ್ಕೆ ಡಾ. ವಿನಾಯಕಾಚಾರ್ ಅವರಿಂದ `ಶ್ರೀ ರಾಘವೇಂದ್ರ ವೈಭವ~ ಪ್ರವಚನ.
ಸ್ಥಳ: 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ. ಸಂಜೆ 6.

ಶ್ರೀ ರಾಘವೇಂದ್ರ ಗುರುಸೇವಾ ಮಂಡಳಿ: ಬೆಳಿಗ್ಗೆ 7ಕ್ಕೆ `ಸುಮದ್ವ ವಿಜಯ~ ಪಾರಾಯಣ, 7.30ಕ್ಕೆ ಪಂಚಾಮೃತ ಅಭಿಷೇಕ, 11ಕ್ಕೆ ಅಲಂಕಾರ ಸೇವೆ. ಸಂಜೆ 6.30ಕ್ಕೆ ಭಾಗ್ಯಲಕ್ಷ್ಮಿ ಮತ್ತು ತಂಡದಿಂದ ಸಂಗೀತ. ರಾತ್ರಿ 8.30ಕ್ಕೆ ಪ್ರಹ್ಲಾದರಾಜರ ಪಲ್ಲಕ್ಕಿ ಉತ್ಸವ.  ಸ್ಥಳ; 145, 13ನೇ ಎ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಗೋಕುಲ 1ನೇ ಹಂತ, ಮತ್ತಿಕೆರೆ.

ಗುರುರಾಜ ಸೇವಾ ಸಮಿತಿ: ವಿಶೇಷ ಪೂಜೆ, ಸಂಜೆ 6.30ಕ್ಕೆ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸವಾಣಿ ವಿಶೇಷ ಕಾರ್ಯಕ್ರಮ. ಸ್ಥಳ: ಯಲಹಂಕ ಉಪನಗರ.

ನವ ಮಂತ್ರಾಲಯ ಮಂದಿರ: ತ್ರಿಕಾಲ ಪೂಜೆ. ಸಂಜೆ 6.30ಕ್ಕೆ ಪದ್ಮಾ ಅಡಿಗ ಮತ್ತು ಕುಮಾರಿ ಹಿರಣ್ಮಯಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಸ್ಥಳ: ನಂ.52, ದೊಡ್ಡ ಬಸವಣ್ಣ ಗುಡಿ ರಸ್ತೆ, ಬಸವನಗುಡಿ.

ಶ್ರೀ ಕೃಷ್ಣ ಮತ್ತು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ: ಬೆಳಿಗ್ಗೆ 10ಕ್ಕೆ ಹರಪನಹಳ್ಳಿಯ ಪರಿಮಳ ಭಜನಾ ಮಂಡಳಿಯಿಂದ ಭಜನೆ. ಸಂಜೆ 6.30ಕ್ಕೆ ಕೃಷ್ಣೇಂದ್ರ ವಾಡೇಕರ್ ಅವರಿಂದ ದಾಸವಾಣಿ. ಸ್ಥಳ: ನಂ.770/ಎ 8ನೇ ಅಡ್ಡ ರಸ್ತೆ, ಗಿರಿನಗರ.

ಶ್ರೀ ರಾಘವೇಂದ್ರ ಸೇವಾ ಸಮಿತಿ: ಬೆಳಿಗ್ಗೆ 9.30ಕ್ಕೆ ಶ್ರೀನಿವಾಸ ತಂತ್ರಿ ಮತ್ತು 10.30ಕ್ಕೆ ಆಯನೂರು ಮಧುಸೂದನಾಚಾರ್ಯ ಅವರಿಂದ ಪ್ರವಚನ. ನಂತರ ಜಯತೀರ್ಥಚಾರ್ ಮಳಗಿ ಅವರಿಗೆ `ಶ್ರೀ ಪ್ರಹ್ಲಾದ~ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ. ಸಂಜೆ 6.30ಕ್ಕೆ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರ ಮಗ ಡಿ. ಬಾಲಕೃಷ್ಣ ಅವರಿಂದ ವೀಣಾವಾದನ. ಸ್ಥಳ: 6ನೇ ಅಡ್ಡ ರಸ್ತೆ, ಎನ್‌ಜಿಇಎಫ್ ಬಡಾವಣೆ, ರಾಜಮಹಲ್ ವಿಲಾಸ್ 2ನೇ ಹಂತ. ಸಂಜಯನಗರ.

ಉಡುಪಿ ಶ್ರೀ ಫಲಿಮಾರು ಮಠ: ಬೆಳಿಗ್ಗೆ 10.30ಕ್ಕೆ ಕಟೀಲು ಲಿಂಗಪ್ಪ ಸೇರಿಗಾರ ಮತ್ತು ತಂಡದವರಿಂದ ನಾದಸ್ವರ ವಾದನ. ಸಂಜೆ 6ಕ್ಕೆ ಶ್ರೀಧರ್ ಸಾಗರ್ ಮತ್ತು ಬಳಗದವರಿಂದ ಸ್ಯಾಕ್ಸೋಪೋನ್. ಸಂಜೆ 7.30ಕ್ಕೆ ವಿದ್ಯದೀಶ ಶ್ರೀಗಳಿಂದ ಪ್ರವಚನ.
ಸ್ಥಳ: ಶ್ರೀರಾಮಾಂಜನೇಯ ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿ, ನಂ.330, 13ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರ.

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ: ಬೆಳಿಗ್ಗೆ 10ಕ್ಕೆ ಪಂಡಿತ ಮಾದನೂರು ಪವಮಾನಾಚಾರ್ಯ ಅವರಿಂದ `ಶ್ರೀ ರಾಘವೇಂದ್ರ ವಿಜಯ~ ಪ್ರವಚನ. ಸಂಜೆ 6ಕ್ಕೆ ರಜತ ಮಹೋತ್ಸವ, ಸ್ವಸ್ತಿವಾಚನ. ಅನುರಾಧಾ ಅವರಿಂದ ವೀಣಾವಾದನ. ಸ್ಥಳ: ಸೀತಾಪತಿ ಅಗ್ರಹಾರ.

ಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ: ರಜತ ಪಲ್ಲಕ್ಕಿ ಉತ್ಸವ. ಸಂಜೆ 7.30ಕ್ಕೆ ರಾಯಚೂರು ಶೇಷಗಿರಿದಾಸ ಅವರಿಂದ ದಾಸವಾಣಿ.
ಸ್ಥಳ; ಶೇಷಾದ್ರಿಪುರ ಪ್ಲಾಟ್‌ಫಾರಂ ರಸ್ತೆ.

ವ್ಯಾಸರಾಜ ಮಠ (ಸೋಸಲೆ): ಬೆಳಿಗ್ಗೆ ವಿಶೇಷ ಪೂಜೆ. 10ಕ್ಕೆ ಪ್ರವಚನ. ಸಂಜೆ 5ಕ್ಕೆ ಅಖಿಲ ಭಾರತ ಮಾಧ್ವ ಮಹಾ ಮಂಡಳಿಯಿಂದ ದಾಸರ ಪದಗಳು. ಸಂಜೆ 7ಕ್ಕೆ ಹರಿಕಥಾ ವಿದ್ವಾನ್ ಎಸ್.ಎನ್.ಸುರೇಶ್ ಅವರಿಂದ `ಕಲಿಯುಗ ಕಲ್ಪತರು ಶ್ರೀರಾಘವೇಂದ್ರ ತೀರ್ಥರ ಚರಿತೆ~್ರ ಹರಿಕಥೆ. ಸ್ಥಳ: ಸುಬ್ರಹ್ಮಣ್ಯನಗರ. ಮಾಹಿತಿಗೆ: 2337 3059.

ವ್ಯಾಸರಾಜ ಮಠ (ಸೋಸಲೆ):  ಬೆಳಿಗ್ಗೆ ವಿಶೇಷ ಪೂಜೆ. 10ಕ್ಕೆ ಶ್ರೀಪಾದಾಚಾರ್ ಅವರಿಂದ `ರಾಘವೇಂದ್ರ ವಿಜಯ~ ಪ್ರವಚನ. 11ಕ್ಕೆ ರಾಜಬೀದಿ ರಥೋತ್ಸವ. ಸಂಜೆ 6.30ಕ್ಕೆ ನಾಟ್ಯ ಮಂಜರಿ ತಂಡದವರಿಂದ `ಭಕ್ತೆ ಕುಸುಮಾಂಜರಿ~ ಭರತನಾಟ್ಯ. ಸ್ಥಳ: ನಂ.1, ಬೆಣ್ಣೆ ಗೋವಿಂದಪ್ಪ ರಸ್ತೆ, ಬಸವನಗುಡಿ.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ: ಬೆಳಿಗ್ಗೆ ವಿಶೇಷ ಪೂಜೆ. ಹರಿವಾಯು ಭಜನಾ ಮಂಡಳಿ, ವಿದ್ಯಾಮಾನ್ಯ ಭಜನಾ ಮಂಡಳಿಯಿಂದ ಭಜನೆ. ಸಂಜೆ 5.30ಕ್ಕೆ ಶಾಂತಾ ಕಿಶೋರ ರಾವ್ ಅವರಿಂದ ವೀಣಾವಾದನ. ಎಚ್. ಬದರಿನಾಥಾಚಾರ್ಯ ಮತ್ತು ಮಳಗಿ ಜಯತೀರ್ಥಾಚಾರ್ಯ ಅವರಿಂದ ಪ್ರವಚನ.  ಸ್ಥಳ; ಪೂರ್ಣಪ್ರಜ್ಞ ನಗರ. ಮಾಹಿತಿಗೆ: 2669 3974.

ಮುಖ್ಯ ಪ್ರಾಣ ರಾಘವೇಂದ್ರ ಸ್ವಾಮಿ  ಸನ್ನಿಧಿ: ಆನಂದ ಬಳಗ ಮಹಿಳಾ ಸದಸ್ಯರಿಂದ ದೇವರನಾಮ, ಚಾಮರಾಜಪೇಟೆ ನೃತ್ಯ ಕುಟೀರದ ದೀಪಾ ಭಟ್ ಅವರ ಶಿಷ್ಯರಿಂದ ನೃತ್ಯ. ಸ್ಥಳ; ಕಾಣಿಯೂರು ಮಠ, ನಂ.137/4ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ. ಸಂಜೆ 5.30. ಮಾಹಿತಿಗೆ: 94805 31005

ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ: ಬೆಳಿಗ್ಗೆ ವಿಶೇಷ ಪೂಜೆ. ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ. ಸಂಜೆ 5.30ಕ್ಕೆ ವೇಣುಗೋಪಾಲಾಚಾರ್ಯ ಅವರಿಂದ `ರಾಯರ ಮಹಿಮೆ~ ಪ್ರವಚನ ಮತ್ತು ಇಂದಿರಾ ದತ್ತಾತ್ರೇಯ ಶರ್ಮಾ  ಮತ್ತು ತಂಡದಿಂದ ದೇವರನಾಮಗಳು.  ಸ್ಥಳ: 2ಸಿಎ 13ನೇ ಮುಖ್ಯ ರಸ್ತೆ, 4ನೇ ಟಿ ಬಡಾವಣೆ, ಜಯನಗರ.

ಅಕ್ನೂರು ಶ್ರೀ ರಾಘವೇಂದ್ರಸ್ವಾಮಿಗಳ ಸನ್ನಿಧಿ: ಬೆಳಿಗ್ಗೆ ಕನಕಾಭಿಷೇಕ, ವಿಶೇಷ ಪೂಜೆ. ಸಂಜೆ 6ಕ್ಕೆ ಕಡಪ ಹನುಮೇಶಾಚಾರ್ ಮತ್ತು ತಂಡದಿಂದ ಕೊಳಲು ವಾದನ. ಸ್ಥಳ: 3ನೇ ಕ್ರಾಸ್, ಗವಿಪುರಂ ಬಡಾವಣೆ. 

ಬನಶಂಕರಿ ಶ್ರೀ ಸರ್ವಜ್ಞ ಸೇವಾ ಬಳಗ: ವೀಣಾ ವಾರುಣಿ ಮತ್ತು ತಂಡದಿಂದ ವೀಣಾ ವಾದನ, ಗಾಯನ. ಸ್ಥಳ: ಬನಶಂಕರಿ 3ನೇ ಘಟ್ಟ, 2ನೇ ಹಂತ, ಹೊಸಕೆರೆಹಳ್ಳಿ. ಸಂಜೆ 7.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT