<p>ಹೊಸಕೋಟೆ ತಾಲ್ಲೂಕು ಚಿಂತಾಮಣಿ ರಸ್ತೆಯ ಪಿಲ್ಲಗುಂಪೆ-ಚೊಕ್ಕಹಳ್ಳಿಯಲ್ಲಿರುವ ವೆಂಕಟಾದ್ರಿ ಮಠದಲ್ಲಿ ಇದೇ ಭಾನುವಾರ (ಮಾ.4) ವೆಂಕಟಾದ್ರಿ ಸ್ವಾಮಿಗಳ 77 ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ಜಾತ್ರೆ ನಡೆಯಲಿದೆ. <br /> <br /> ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಿಂದಿನ ಭಾನುವಾರ ಆರಾಧನಾ ಮಹೋತ್ಸವ ನಡೆಯಲಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಅನೇಕ ಕಡೆಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.<br /> <br /> ಮಠದ ಆವರಣದಲ್ಲಿ 27 ಅಡಿ ಎತ್ತರದ ತ್ರಿಪದಿನಾಮ, ಶಂಖ ಹಾಗೂ ಚಕ್ರಗಳನ್ನು ನಿರ್ಮಿಸಲಾಗಿದ್ದು, ಇದು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ. 1935ರಲ್ಲಿ ನಿಧನರಾದ ಪವಾಡ ಪುರುಷ ವೆಂಕಟಾದ್ರಿ ಸ್ವಾಮಿಗಳ ಗದ್ದುಗೆಯನ್ನೂ ಇಲ್ಲಿ ನಿರ್ಮಿಸಲಾಗಿದೆ.<br /> ಆವರಣದಲ್ಲಿ ಕಾಗೆ, ಹಲ್ಲಿ, ಆಮೆ ವಿಗ್ರಹಗಳನ್ನು ನಿರ್ಮಿಸಿದ್ದು ಅದನ್ನು ಮುಟ್ಟಿ ಪೂಜಿಸಿದರೆ ದೋಷ ಪರಿಹಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಈಚೆಗೆ ನವ ಆಂಜನೇಯಸ್ವಾಮಿ ಶಿಲೆ ಪ್ರತಿಷ್ಠಾಪಿಸಲಾಗಿದೆ.<br /> <br /> ಪ್ರತಿ ಅಮಾವಾಸ್ಯೆ ಗಾಯತ್ರಿ ಪೂಜೆ ಮಂಗಳವಾರ, ಗುರುವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯುತ್ತವೆ. ಆ ದಿನ ಪೂಜೆ ಸಲ್ಲಿಸಿದರೆ ತಮ್ಮ ಕಷ್ಟ ನಿವಾರಣೆ ಯಾಗುತ್ತದೆಯೆಂಬ ನಂಬಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. <br /> <br /> ವೆಂಕಟಾದ್ರಿಸ್ವಾಮಿಗಳ ಮಗ ಕುನ್ನಾಚಾರ್ಸ್ವಾಮಿ ಇಲ್ಲಿ ಮಠ ನಿರ್ಮಿಸಿದ್ದು ಅವರ ನಿಧನದ ನಂತರ ಅವರ ಮಗ ಕೆ.ವೆಂಕಟಾಚಾರ್ಸ್ವಾಮಿ ಮಠದ ಉಸ್ತುವಾರಿ ವಹಿಸಿಕೊಂಡಿದ್ದಾರೆ. <br /> ಆರಾಧನಾ ಮಹೋತ್ಸವದ ಅಂಗವಾಗಿ ಮಾ.3 ರಂದು 24 ಗಂಟೆ ರಾಮಕೋಟಿ ಭಜನೆ, ಮಾ.4 ರಂದು ಹರಿಕಥೆ ಹಾಗೂ ಮಾ.5 ರಂದು ರಾತ್ರಿ `ದಾನವೀರಶೂರ ಕರ್ಣ~ ಎಂಬ ನಾಟಕ ಪ್ರದರ್ಶನ ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಕೋಟೆ ತಾಲ್ಲೂಕು ಚಿಂತಾಮಣಿ ರಸ್ತೆಯ ಪಿಲ್ಲಗುಂಪೆ-ಚೊಕ್ಕಹಳ್ಳಿಯಲ್ಲಿರುವ ವೆಂಕಟಾದ್ರಿ ಮಠದಲ್ಲಿ ಇದೇ ಭಾನುವಾರ (ಮಾ.4) ವೆಂಕಟಾದ್ರಿ ಸ್ವಾಮಿಗಳ 77 ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ಜಾತ್ರೆ ನಡೆಯಲಿದೆ. <br /> <br /> ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಿಂದಿನ ಭಾನುವಾರ ಆರಾಧನಾ ಮಹೋತ್ಸವ ನಡೆಯಲಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಅನೇಕ ಕಡೆಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.<br /> <br /> ಮಠದ ಆವರಣದಲ್ಲಿ 27 ಅಡಿ ಎತ್ತರದ ತ್ರಿಪದಿನಾಮ, ಶಂಖ ಹಾಗೂ ಚಕ್ರಗಳನ್ನು ನಿರ್ಮಿಸಲಾಗಿದ್ದು, ಇದು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ. 1935ರಲ್ಲಿ ನಿಧನರಾದ ಪವಾಡ ಪುರುಷ ವೆಂಕಟಾದ್ರಿ ಸ್ವಾಮಿಗಳ ಗದ್ದುಗೆಯನ್ನೂ ಇಲ್ಲಿ ನಿರ್ಮಿಸಲಾಗಿದೆ.<br /> ಆವರಣದಲ್ಲಿ ಕಾಗೆ, ಹಲ್ಲಿ, ಆಮೆ ವಿಗ್ರಹಗಳನ್ನು ನಿರ್ಮಿಸಿದ್ದು ಅದನ್ನು ಮುಟ್ಟಿ ಪೂಜಿಸಿದರೆ ದೋಷ ಪರಿಹಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಈಚೆಗೆ ನವ ಆಂಜನೇಯಸ್ವಾಮಿ ಶಿಲೆ ಪ್ರತಿಷ್ಠಾಪಿಸಲಾಗಿದೆ.<br /> <br /> ಪ್ರತಿ ಅಮಾವಾಸ್ಯೆ ಗಾಯತ್ರಿ ಪೂಜೆ ಮಂಗಳವಾರ, ಗುರುವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯುತ್ತವೆ. ಆ ದಿನ ಪೂಜೆ ಸಲ್ಲಿಸಿದರೆ ತಮ್ಮ ಕಷ್ಟ ನಿವಾರಣೆ ಯಾಗುತ್ತದೆಯೆಂಬ ನಂಬಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. <br /> <br /> ವೆಂಕಟಾದ್ರಿಸ್ವಾಮಿಗಳ ಮಗ ಕುನ್ನಾಚಾರ್ಸ್ವಾಮಿ ಇಲ್ಲಿ ಮಠ ನಿರ್ಮಿಸಿದ್ದು ಅವರ ನಿಧನದ ನಂತರ ಅವರ ಮಗ ಕೆ.ವೆಂಕಟಾಚಾರ್ಸ್ವಾಮಿ ಮಠದ ಉಸ್ತುವಾರಿ ವಹಿಸಿಕೊಂಡಿದ್ದಾರೆ. <br /> ಆರಾಧನಾ ಮಹೋತ್ಸವದ ಅಂಗವಾಗಿ ಮಾ.3 ರಂದು 24 ಗಂಟೆ ರಾಮಕೋಟಿ ಭಜನೆ, ಮಾ.4 ರಂದು ಹರಿಕಥೆ ಹಾಗೂ ಮಾ.5 ರಂದು ರಾತ್ರಿ `ದಾನವೀರಶೂರ ಕರ್ಣ~ ಎಂಬ ನಾಟಕ ಪ್ರದರ್ಶನ ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>