ಬುಧವಾರ ರೈಲು ಅಪಘಾತದಲ್ಲಿ ಸಾವಿಗೀಡಾಗಿದ್ದ ಸಲಾಮಾನಿ ಬಾರಿಕ್ ಎಂಬ 76ರ ಹರೆಯದ ವಿಧವೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಲಸೋರ್ ಪಟ್ಟಣಕ್ಕೆ ಸಾಗಿಸಬೇಕಾಗಿತ್ತು. ಆದರೆ ಅಲ್ಲಿಗೆ ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ. ಅಲ್ಲಿನ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿಟ್ಟಿದ್ದ ಮೃತದೇಹವನ್ನು 30 ಕಿಮಿ ದೂರವಿರುವ ಆಸ್ಪತ್ರೆಗೆ ಸಾಗಿಸಲು ಮಾಡುವುದೇನು? ಮೃತದೇಹವನ್ನು ಸಾಗಿಸಲು ಆಟೋದವನಲ್ಲಿ ಕೇಳಿದರೆ ಆಟೋ ಚಾರ್ಜ್ ದುಬಾರಿಯಾಗಿತ್ತು.
ಹೀಗಿರುವಾಗ ಅಲ್ಲಿನ ಕೆಲಸದವರು ಆ ಮೃತದೇಹದ ಎಲುಬುಗಳನ್ನು ಮುರಿದು ಮೂಟೆ ಕಟ್ಟಿ ಆ ಮೂಟೆಯನ್ನು ಬಿದಿರಿನ ಕಂಬಕ್ಕೆ ಕಟ್ಟಿ 2 ಕಿ.,ಮೀ ದೂರದಲ್ಲಿರುವ ರೈಲು ನಿಲ್ದಾಣಕ್ಕೆ ಹೊತ್ತೊಯ್ದಿದ್ದಾರೆ. ಅಲ್ಲಿಂದ ರೈಲಿನ ಗೂಡ್ಸ್ ಬೋಗಿಯಲ್ಲಿ ಮೃತದೇಹವನ್ನು ಸಾಗಿಸಲಾಗಿದೆ.