ಈ ವಿವಾದವನ್ನು ಕಾನೂನು ವ್ಯಾಪ್ತಿಯೊಳಗೆ ಪರಿಹರಿಸಬಹುದು. ಕಾನೂನು ಉಲ್ಲಂಘನೆಯೊಂದೇ ಅನುಕೂಲಕರ ಪರ್ಯಾಯ ಮಾರ್ಗ ಅಲ್ಲ ಎಂದು ಮೋದಿ ಹೇಳಿದ್ದಾರೆ.
ಎರಡು ರಾಜ್ಯಗಳ ಜನರು ಸಂಯಮ ಪ್ರದರ್ಶಿಸಬೇಕು ಎಂದು ನಾನು ಹೇಳ ಬಯಸುತ್ತೇನೆ ಮತ್ತು ನಾಗರಿಕರು ಜವಾಬ್ದಾರಿಗಳನ್ನು ಅರಿತು ನಡೆಯಬೇಕು. ಶಾಂತಿ ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಂಯಮ, ಸಾಮರಸ್ಯವನ್ನು ಬಿಟ್ಟು ಪರಿಹಾರ ಹುಡುಕುವ ಅನ್ಯ ಮಾರ್ಗ ಹಿಡಿದರೆ ಅವು, ಹಿಂಸೆ, ವಿನಾಶ ಮತ್ತು ಅಗ್ನಿ ಸ್ಪರ್ಶದಂತಹ ಕೃತ್ಯಕ್ಕೆ ಎಡೆ ಮಾಡುತ್ತವೆ ಎಂದಿದ್ದಾರೆ.