ಗೋವಾ: ಭಯೋತ್ಪಾನೆ ನಿರ್ಮೂಲನೆಗಾಗಿ ‘ಶೂನ್ಯ ಸೈರಣ ನೀತಿ’ಗೆ ಭಾರತ ಮತ್ತು ರಷ್ಯಾ ಸಹಿ ಮಾಡಿವೆ. ಇದೇ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಭಾರತದ ‘ಹಳೆಯ ಗೆಳೆಯ’ ಎಂದಿದ್ದಾರೆ.
* ಕಾಮೋವ್ –ಕೆಎ226 ಹೆಲಿಕಾಪ್ಟರ್ ಉತ್ಪಾದನಾ ಒಪ್ಪಂದ
* ಎಸ್400 ಕ್ಷಿಪಣಿ ವ್ಯವಸ್ಥೆ ಒಪ್ಪಂದ
* ಭಯೋತ್ಪಾದನ ಚಟುವಟಿಕೆಗಳಿಗೆ ತಕ್ಕ ಉತ್ತರ ನೀಡಲು ‘ಜೀರೋ ಟಾಲರೆನ್ಸ್ ಪಾಲಿಸಿ’(ಶೂನ್ಯ ಸೈರಣ ನೀತಿ)
* ಕೂಡುಕುಳಂ ಅಣುಸ್ಥಾವರದ 3 ಮತ್ತು 4ನೇ ಘಟಕಗಳ ಕಾಮಗಾರಿಗೆ ಚಾಲನೆ. ಕೂಡುಕುಳಂ ಅಣುಸ್ಥಾವರದ 2ನೇ ಘಟಕದಲ್ಲಿ ಶಕ್ತಿ ಉತ್ಪಾದನೆ ಆರಂಭ
* ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ರಚನೆ ಸ್ಥಾಪನೆ
* ಆಂಧ್ರ ಪ್ರದೇಶದಲ್ಲಿ ಹಡಗು ನಿರ್ಮಾಣ ಮತ್ತು ಪರಿಣತ ತರಬೇತಿ
* ಹರಿಯಾಣ ಸ್ಮಾರ್ಟ್ ಸಿಟಿ ಯೋಜನೆ
* ರಾಸ್ನೆಫ್ಟ್ ಮತ್ತು ಎಸ್ಸಾರ್ ತೈಲ ಶುದ್ಧೀಕರಣ ಮೂಲಸೌಕರ್ಯ ಅಭಿವೃದ್ಧಿ
* ರಾಸ್ನೆಫ್ಟ್ ಮತ್ತು ಒವಿಎಲ್ ಇಂಧನ
* ನಾಗ್ಪುರ–ಸಿಕಂದರಾಬಾದ್ ಹೈದರಾಬಾದ್ ಹೈ ಸ್ಪೀಡ್ ರೈಲು ಯೋಜನೆ
* ಇಂಧನ ಸಹಕಾರ ಒಪ್ಪಂದ 2016 ಮತ್ತು 2017
* ಭಾರತ ಮತ್ತು ರಷ್ಯಾ ನಡುವಿನ ಸಚಿವಾಲಯಗಳ ನಡುವಿನ ಸಮಾಲೋಚನೆಗೆ ಶಿಷ್ಟಾಚಾರ ಸಂಹಿತೆ
* ಸೈಬರ್ ರಕ್ಷಣೆ
* ಜಾಗತಿಕ ರಕ್ಷಣೆ ಕುರಿತಂತೆ ಭಾರತ ಮತ್ತು ರಷ್ಯಾ ಜಂಟಿ ಒಪ್ಪಂದ
* ರಷ್ಯಾದಿಂದ ಯುದ್ಧನೌಕೆ ಖರೀದಿ ಕುರಿತು ಸರ್ಕಾರದ ಆಂತರಿಕ ಒಪ್ಪಂದ