<div> <strong>ಕೋಣನಕುಂಟೆಯಲ್ಲಿ ಕಳ್ಳರ ಕಾಟ</strong><div> ಕನಕಪುರ ರಸ್ತೆ ಪಕ್ಕದ ಅಂಜನಾಪುರ ಮುಖ್ಯ ರಸ್ತೆಯಲ್ಲಿರುವ ಕೋಣನಕುಂಟೆ, ಸೌದಾಮಿನಿ ಲೇಔಟ್ನಲ್ಲಿ ಇತ್ತೀಚೆಗೆ ಕಳ್ಳರ ಕಾಟ ಅಧಿಕವಾಗಿದೆ. ಮನೆಯ ಹೊರಗಡೆ ಇರುವ ಚಪ್ಪಲಿ, ಶೂಗಳೂ ಕಳುವಾಗುತ್ತಿವೆ. ಕೆಲವು ಮನೆಗಳಲ್ಲಿ ವಾಟರ್ ಮೀಟರ್ಗಳು ಕಳ್ಳತನವಾಗಿವೆ. <br /> </div><div> ಕೋಣನಕುಂಟೆ ಪೊಲೀಸ್ ಠಾಣೆ ಸಮೀಪದಲ್ಲಿಯೇ ಇದ್ದರೂ ಕಳ್ಳರಿಗೆ ಪೋಲಿಸರ ಭಯವೇ ಇಲ್ಲದಂತಾಗಿದೆ. ಹೊಯ್ಸಳ ವಾಹನ ಇದ್ದೂ ಪ್ರಯೋಜನವಿಲ್ಲ. ಇಂತಹ ಹೊಯ್ಸಳ ಮತ್ತು ಸಿಬ್ಬಂದಿ ನಮಗೆ ಬೇಕೆ? ಇನ್ನು ಹೊಸದಾಗಿ ಪ್ರಾರಂಭಗೊಂಡಿರುವ ಕೋಣನಕುಂಟೆ ಪೊಲೀಸ್ ಸ್ಟೇಷನ್ನಿಂದ ಸಾರ್ವಜನಿಕರಿಗೆ ಉಪಯೋಗವಿಲ್ಲದಂತಾಗಿದೆ.</div><div> <strong>–ಸುನಂದಾ, ಕೋಣನಕುಂಟೆ</strong><br /> </div><div> <strong>ಫುಟ್ಪಾತ್ ತೆರವುಗೊಳಿಸಿ</strong></div><div> ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರದಲ್ಲಿರುವ ಬಾಟಾ ಶೋರೂಂನ ಪಕ್ಕದಲ್ಲಿರುವ ಬಿರಿಯಾನಿ ಅಂಗಡಿಯವರು ಅಂಗಡಿಯ </div><div> ಮುಂದಿದ್ದ ಫುಟ್ಪಾತ್ನಲ್ಲಿಯೇ ಗ್ಯಾಸ್ ಸಿಲಿಂಡರ್ ಹಾಗೂ ದೊಡ್ಡ ಬಿರಿಯಾನಿ ಪಾತ್ರೆ ಇಟ್ಟು ಅಡುಗೆ ಮಾಡುತ್ತಾರೆ.<br /> <br /> ಹೀಗಾಗಿ ಇಲ್ಲಿ ಫುಟ್ಪಾತ್ನಲ್ಲಿ ಸಾರ್ವಜನಿಕರು ನಡೆದಾಡುವುದು ದುಸ್ತರವಾಗಿದೆ. ಬಿಡುವಿಲ್ಲದ ವಾಹನಗಳ ಓಡಾಟದಿಂದಾಗಿ ಈ ರಸ್ತೆಯಲ್ಲಿ ಹೋಗಲು ಅಸಾಧ್ಯ. ಈಗ ಸ್ವಲ್ಪ ದಿನಗಳ ಹಿಂದೆ ಬಿರಿಯಾನಿ ಅಂಗಡಿ ಹಾಗೂ ಬಾಟಾ ಶೋರೂಂ ಅಂಗಡಿಯ ಮಧ್ಯೆ ದಾರಿಯಲ್ಲಿ ಒಂದು ತಡೆಗೋಡೆಯನ್ನು ನಿರ್ಮಿಸಿ ಕಾಲುದಾರಿಯನ್ನೇ ಮುಚ್ಚಿದ್ದರು.<br /> </div><div> ಬಿಬಿಎಂಪಿಯವರು ಇದನ್ನು ನೋಡಿಯೂ ನೋಡದಂತಿದ್ದು, ತಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಪರಿಗಣಿಸಿದಂತೆ ತೋರುತ್ತಿದೆ.</div><div> ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕಡೆಗೆ ಗಮನ ಹರಿಸಿ ಕಾಲುದಾರಿಯನ್ನು ತೆರವು ಮಾಡಿಸಿ ಜನರಿಗೆ ತಿರುಗಾಡಲು ಅನುಕೂಲ</div><div> ಮಾಡಿಕೊಡಬೇಕು.</div><div> <strong>–ಕವಿತಾ ರೆಡ್ಡಿ, ರಾಜಣ್ಣ ಕಾಲೋನಿ, ವಿಜ್ಞಾನ ನಗರ</strong></div><div> </div><div> <strong>ರಸ್ತೆ ಸ್ವಚ್ಛತೆ ಬೆಳಿಗ್ಗೆ ಬೇಗ ಮುಗಿಸಲಿ</strong></div><div> ನಮ್ಮ ಮಹಾನಗರದಲ್ಲಿ ಪೌರ ಕಾರ್ಮಿಕರು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಪ್ರಮುಖ ರಸ್ತೆಯಲ್ಲೂ ರಸ್ತೆ ಸ್ವಚ್ಛತಾ ಕಾರ್ಯ ಮಾಡುತ್ತಿರುತ್ತಾರೆ. </div><div> ಪೌರ ಕಾರ್ಮಿಕರಿಗೆ ಹಿಂದೆ ಬೆಳಿಗ್ಗೆ ಆರು ಗಂಟೆಗೇ ಹಾಜರಿ ತೆಗೆದುಕೊಂಡು ಕಾರ್ಯ ನಿರ್ವಹಿಸಲು ಸೂಚಿಸಲಾಗುತ್ತಿತ್ತು.</div><div> <br /> ಅದರಂತೆ ಬೆಳಿಗ್ಗೆಯೇ ರಸ್ತೆ ಸ್ವಚ್ಛತಾ ಕಾರ್ಯ ಮಾಡಿ ಮುಗಿಸುತ್ತಿದ್ದರು. ಆದರೆ ಈಗ ಸಂಬಂಧಿಸಿದವರು ಇದನ್ನು ಅವರ ಗಮನಕ್ಕೆ ತಂದರೂ ಅವರು ಇದರ ಬಗ್ಗೆ ಗಮನಹರಿಸಿಲ್ಲ. ರಸ್ತೆ ಸ್ವಚ್ಛತಾ ಕಾರ್ಯವನ್ನು ಬೆಳಿಗ್ಗೆ ಬೇಗ ಮಾಡಿ ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. </div><div> <strong>–ಎ.ಕೆ.ಅನಂತಮೂರ್ತಿ, ನಾಗೇಂದ್ರ ಬ್ಲಾಕ್</strong></div><div> </div><div> <strong>ಬಸ್ ಸಂಪರ್ಕ ಕಲ್ಪಿಸಿ</strong></div><div> ಬಿಎಂಟಿಸಿ ಬಸ್ಸುಗಳು ಜೆ.ಪಿ.ನಗರದ ಜಂಬೂ ಸವಾರಿ ದಿಣ್ಣೆಯಿಂದ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಶಿವಾಜಿನಗರ ಕಡೆಗೆ ಪುಟ್ಟೇನಹಳ್ಳಿ ಮಾರ್ಗವಾಗಿ ಸಂಚರಿಸುತ್ತವೆ. <br /> </div><div> ಆದರೆ ಜಂಬೂ ಸವಾರಿ ದಿಣ್ಣೆ, ಸುರಭಿನಗರ, ನಾಯಕ್ ಲೇಔಟ್, ಶ್ರೀಮಾತಾ ಲೇಔಟ್, ವೆಂಕಟೇಶ್ವರ ಲೇಔಟ್ನ ನಿವಾಸಿಗಳಿಗೆ ಬನ್ನೇರುಘಟ್ಟ ರಸ್ತೆಗೆ ತೆರಳಬೇಕಾದಲ್ಲಿ ಈ ಮಾರ್ಗವಾಗಿ ಬಸ್ನ ವ್ಯವಸ್ಥೆ ಇಲ್ಲ. </div><div> </div><div> ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದಿಂದ ಹೊರಡುವ ಕೆಲ ಬಸ್ಗಳನ್ನಾದರೂ ಬಿ.ಕೆ.ಸರ್ಕಲ್, ವೆಂಕಟೇಶ್ವರ ಲೇಔಟ್, ಲೊಯೆಲಾ ಶಾಲಾ ಮಾರ್ಗವಾಗಿ ಬನ್ನೇರುಘಟ್ಟ ರಸ್ತೆಗೆ ಸಂಪರ್ಕಿಸುವಂತೆ ಮಾರ್ಗ ಬದಲಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ವ್ಯವಸ್ಥೆ ಮಾಡಿ. </div><div> <strong>–ವಿ.ಹೇಮಂತಕುಮಾರ, ಜೆ.ಪಿ ನಗರ 8ನೇ ಹಂತ</strong><br /> </div><div> <strong>ಅಗೆದ ಗುಂಡಿಗಳನ್ನು ಮುಚ್ಚಿಸಿ</strong></div><div> ಬೆಳ್ಳಂದೂರು ಪೆಟ್ರೋಲ್ ಬಂಕ್ ಸಮೀಪದ ಗ್ರೀನ್ವೆಲ್ ಲೇಔಟ್ ಮಾರ್ಗೊಸ ಅವೆನ್ಯೂ ಅಪಾರ್ಟ್ಮೆಂಟ್ ಬಳಿ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಈ ಗುಂಡಿಗಳನ್ನು ಯಾಕೆ ಮುಚ್ಚುತ್ತಿಲ್ಲ? ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು. </div><div> <strong>–ಬೆಳ್ಳಾವೆ ರಮೇಶ್, ಬೆಳ್ಳಂದೂರು</strong><br /> </div><div> <strong>ನಂ. 258 ಬಿಎನ್ ಬಸ್ಸುಗಳು ಬೇಕು</strong></div><div> ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿ ಒಂದಾದ ‘ಕುವೆಂಪು ನಗರದಿಂದ ನೆಲಮಂಗಲಕ್ಕೆ ಹೋಗುವ ಬಿಎಂಟಿಸಿಯ ಮಾರ್ಗ ಸಂಖ್ಯೆ 258 </div><div> ಬಿಎನ್ ಬಸ್ಸುಗಳಿಂದ ಈ ಮಾರ್ಗದಲ್ಲಿ ಬರುವ ಲಾಲ್ಬಾಗ್, ಕುವೆಂಪುನಗರ, ಕಾರ್ಪೊರೇಶನ್, ಯಶವಂತಪುರ, ದಾಸರಹಳ್ಳಿ, ಮಾಕಳಿ, ನೆಲಮಂಗಲದ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತಿತ್ತು. ಈ ಮಾರ್ಗದ ಬಸ್ಸುಗಳು ಬಿಎಂಟಿಸಿಗೆ ಲಾಭದಾಯಕವೂ ಹೌದು. <br /> </div><div> ಆದರೆ ಈಗ ಕೆಲವು ದಿನಗಳಿಂದ ಮಾರ್ಗ ಸಂಖ್ಯೆ 258 ಬಿಎನ್ ಬಸ್ಸುಗಳು ಅಪರೂಪ ಎಂಬಂತಾಗಿದೆ. ಇದರಿಂದ ಈ ಮಾರ್ಗದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದೆ. ಆದ್ದರಿಂದ ಬಿಎಂಟಿಸಿಯ ಸಂಬಂಧಿಸಿದ ಅಧಿಕಾರಿಗಳು, ಈ ಮೊದಲಿನಂತೆಯೇ ಕುವೆಂಪು ನಗರದಿಂದ ಬೆಳಿಗ್ಗೆ 7–50, 8–30, 9–50, 10–50, 11–50ಕ್ಕೆ ಮಾರ್ಗ ಸಂಖ್ಯೆ 258 ಬಿಎನ್ ಬಸ್ಸುಗಳ ಸಂಚಾರಕ್ಕೆ ಅನುವು </div><div> ಮಾಡಿಕೊಡಬೇಕು.</div><div> <strong>–ಆರ್.ಎನ್.ಎಸ್. ರಾವ್, ಎಂ.ಎಸ್.ರಸ್ತೆ, </strong></div><div> </div><div> <strong>ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಿ</strong><br /> ಐಟಿಪಿಎಲ್ ಮುಖ್ಯರಸ್ತೆಯ ವಾರ್ಡ್ ನಂ 85ರ ಅಣ್ಣಯ್ಯ ಲೇಔಟ್ ರಸ್ತೆಯು ಒಂದು ವರ್ಷದಿಂದ ದುರಸ್ತಿ ಕಾಣದೆ ಸಂಚಾರಕ್ಕೆ ತೊಡಕು ಉಂಟು ಮಾಡಿದೆ. ರಸ್ತೆಯ ಈ ಸ್ಥಿತಿಯಿಂದಾಗಿ ವಾಹನ ಸಂಚಾರಕ್ಕೆ ಹಾಗೂ ಸ್ಥಳೀಯರಿಗೆ ನಡೆದಾಡಲು ತೊಂದರೆಯಾಗಿದೆ.</div><p>ಇನ್ನು ಮಳೆ ಬಂದರೆ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಕೆಸರು ನಿಲ್ಲುತ್ತದೆ. ಹೀಗಾಗಿ ಮಳೆಗಾಲ ಆರಂಭವಾಗುವುದರೊಳಗೆ ಈ ರಸ್ತೆಯನ್ನು ಸರಿಪಡಿಸಬೇಕಾಗಿದೆ.<br /> <strong>ನಾಗರಾಜ ರೆಡ್ಡಿ, ಅಣ್ಣಯ್ಯ ಲೇಔಟ್</strong></p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಕೋಣನಕುಂಟೆಯಲ್ಲಿ ಕಳ್ಳರ ಕಾಟ</strong><div> ಕನಕಪುರ ರಸ್ತೆ ಪಕ್ಕದ ಅಂಜನಾಪುರ ಮುಖ್ಯ ರಸ್ತೆಯಲ್ಲಿರುವ ಕೋಣನಕುಂಟೆ, ಸೌದಾಮಿನಿ ಲೇಔಟ್ನಲ್ಲಿ ಇತ್ತೀಚೆಗೆ ಕಳ್ಳರ ಕಾಟ ಅಧಿಕವಾಗಿದೆ. ಮನೆಯ ಹೊರಗಡೆ ಇರುವ ಚಪ್ಪಲಿ, ಶೂಗಳೂ ಕಳುವಾಗುತ್ತಿವೆ. ಕೆಲವು ಮನೆಗಳಲ್ಲಿ ವಾಟರ್ ಮೀಟರ್ಗಳು ಕಳ್ಳತನವಾಗಿವೆ. <br /> </div><div> ಕೋಣನಕುಂಟೆ ಪೊಲೀಸ್ ಠಾಣೆ ಸಮೀಪದಲ್ಲಿಯೇ ಇದ್ದರೂ ಕಳ್ಳರಿಗೆ ಪೋಲಿಸರ ಭಯವೇ ಇಲ್ಲದಂತಾಗಿದೆ. ಹೊಯ್ಸಳ ವಾಹನ ಇದ್ದೂ ಪ್ರಯೋಜನವಿಲ್ಲ. ಇಂತಹ ಹೊಯ್ಸಳ ಮತ್ತು ಸಿಬ್ಬಂದಿ ನಮಗೆ ಬೇಕೆ? ಇನ್ನು ಹೊಸದಾಗಿ ಪ್ರಾರಂಭಗೊಂಡಿರುವ ಕೋಣನಕುಂಟೆ ಪೊಲೀಸ್ ಸ್ಟೇಷನ್ನಿಂದ ಸಾರ್ವಜನಿಕರಿಗೆ ಉಪಯೋಗವಿಲ್ಲದಂತಾಗಿದೆ.</div><div> <strong>–ಸುನಂದಾ, ಕೋಣನಕುಂಟೆ</strong><br /> </div><div> <strong>ಫುಟ್ಪಾತ್ ತೆರವುಗೊಳಿಸಿ</strong></div><div> ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರದಲ್ಲಿರುವ ಬಾಟಾ ಶೋರೂಂನ ಪಕ್ಕದಲ್ಲಿರುವ ಬಿರಿಯಾನಿ ಅಂಗಡಿಯವರು ಅಂಗಡಿಯ </div><div> ಮುಂದಿದ್ದ ಫುಟ್ಪಾತ್ನಲ್ಲಿಯೇ ಗ್ಯಾಸ್ ಸಿಲಿಂಡರ್ ಹಾಗೂ ದೊಡ್ಡ ಬಿರಿಯಾನಿ ಪಾತ್ರೆ ಇಟ್ಟು ಅಡುಗೆ ಮಾಡುತ್ತಾರೆ.<br /> <br /> ಹೀಗಾಗಿ ಇಲ್ಲಿ ಫುಟ್ಪಾತ್ನಲ್ಲಿ ಸಾರ್ವಜನಿಕರು ನಡೆದಾಡುವುದು ದುಸ್ತರವಾಗಿದೆ. ಬಿಡುವಿಲ್ಲದ ವಾಹನಗಳ ಓಡಾಟದಿಂದಾಗಿ ಈ ರಸ್ತೆಯಲ್ಲಿ ಹೋಗಲು ಅಸಾಧ್ಯ. ಈಗ ಸ್ವಲ್ಪ ದಿನಗಳ ಹಿಂದೆ ಬಿರಿಯಾನಿ ಅಂಗಡಿ ಹಾಗೂ ಬಾಟಾ ಶೋರೂಂ ಅಂಗಡಿಯ ಮಧ್ಯೆ ದಾರಿಯಲ್ಲಿ ಒಂದು ತಡೆಗೋಡೆಯನ್ನು ನಿರ್ಮಿಸಿ ಕಾಲುದಾರಿಯನ್ನೇ ಮುಚ್ಚಿದ್ದರು.<br /> </div><div> ಬಿಬಿಎಂಪಿಯವರು ಇದನ್ನು ನೋಡಿಯೂ ನೋಡದಂತಿದ್ದು, ತಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಪರಿಗಣಿಸಿದಂತೆ ತೋರುತ್ತಿದೆ.</div><div> ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕಡೆಗೆ ಗಮನ ಹರಿಸಿ ಕಾಲುದಾರಿಯನ್ನು ತೆರವು ಮಾಡಿಸಿ ಜನರಿಗೆ ತಿರುಗಾಡಲು ಅನುಕೂಲ</div><div> ಮಾಡಿಕೊಡಬೇಕು.</div><div> <strong>–ಕವಿತಾ ರೆಡ್ಡಿ, ರಾಜಣ್ಣ ಕಾಲೋನಿ, ವಿಜ್ಞಾನ ನಗರ</strong></div><div> </div><div> <strong>ರಸ್ತೆ ಸ್ವಚ್ಛತೆ ಬೆಳಿಗ್ಗೆ ಬೇಗ ಮುಗಿಸಲಿ</strong></div><div> ನಮ್ಮ ಮಹಾನಗರದಲ್ಲಿ ಪೌರ ಕಾರ್ಮಿಕರು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಪ್ರಮುಖ ರಸ್ತೆಯಲ್ಲೂ ರಸ್ತೆ ಸ್ವಚ್ಛತಾ ಕಾರ್ಯ ಮಾಡುತ್ತಿರುತ್ತಾರೆ. </div><div> ಪೌರ ಕಾರ್ಮಿಕರಿಗೆ ಹಿಂದೆ ಬೆಳಿಗ್ಗೆ ಆರು ಗಂಟೆಗೇ ಹಾಜರಿ ತೆಗೆದುಕೊಂಡು ಕಾರ್ಯ ನಿರ್ವಹಿಸಲು ಸೂಚಿಸಲಾಗುತ್ತಿತ್ತು.</div><div> <br /> ಅದರಂತೆ ಬೆಳಿಗ್ಗೆಯೇ ರಸ್ತೆ ಸ್ವಚ್ಛತಾ ಕಾರ್ಯ ಮಾಡಿ ಮುಗಿಸುತ್ತಿದ್ದರು. ಆದರೆ ಈಗ ಸಂಬಂಧಿಸಿದವರು ಇದನ್ನು ಅವರ ಗಮನಕ್ಕೆ ತಂದರೂ ಅವರು ಇದರ ಬಗ್ಗೆ ಗಮನಹರಿಸಿಲ್ಲ. ರಸ್ತೆ ಸ್ವಚ್ಛತಾ ಕಾರ್ಯವನ್ನು ಬೆಳಿಗ್ಗೆ ಬೇಗ ಮಾಡಿ ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. </div><div> <strong>–ಎ.ಕೆ.ಅನಂತಮೂರ್ತಿ, ನಾಗೇಂದ್ರ ಬ್ಲಾಕ್</strong></div><div> </div><div> <strong>ಬಸ್ ಸಂಪರ್ಕ ಕಲ್ಪಿಸಿ</strong></div><div> ಬಿಎಂಟಿಸಿ ಬಸ್ಸುಗಳು ಜೆ.ಪಿ.ನಗರದ ಜಂಬೂ ಸವಾರಿ ದಿಣ್ಣೆಯಿಂದ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಶಿವಾಜಿನಗರ ಕಡೆಗೆ ಪುಟ್ಟೇನಹಳ್ಳಿ ಮಾರ್ಗವಾಗಿ ಸಂಚರಿಸುತ್ತವೆ. <br /> </div><div> ಆದರೆ ಜಂಬೂ ಸವಾರಿ ದಿಣ್ಣೆ, ಸುರಭಿನಗರ, ನಾಯಕ್ ಲೇಔಟ್, ಶ್ರೀಮಾತಾ ಲೇಔಟ್, ವೆಂಕಟೇಶ್ವರ ಲೇಔಟ್ನ ನಿವಾಸಿಗಳಿಗೆ ಬನ್ನೇರುಘಟ್ಟ ರಸ್ತೆಗೆ ತೆರಳಬೇಕಾದಲ್ಲಿ ಈ ಮಾರ್ಗವಾಗಿ ಬಸ್ನ ವ್ಯವಸ್ಥೆ ಇಲ್ಲ. </div><div> </div><div> ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದಿಂದ ಹೊರಡುವ ಕೆಲ ಬಸ್ಗಳನ್ನಾದರೂ ಬಿ.ಕೆ.ಸರ್ಕಲ್, ವೆಂಕಟೇಶ್ವರ ಲೇಔಟ್, ಲೊಯೆಲಾ ಶಾಲಾ ಮಾರ್ಗವಾಗಿ ಬನ್ನೇರುಘಟ್ಟ ರಸ್ತೆಗೆ ಸಂಪರ್ಕಿಸುವಂತೆ ಮಾರ್ಗ ಬದಲಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ವ್ಯವಸ್ಥೆ ಮಾಡಿ. </div><div> <strong>–ವಿ.ಹೇಮಂತಕುಮಾರ, ಜೆ.ಪಿ ನಗರ 8ನೇ ಹಂತ</strong><br /> </div><div> <strong>ಅಗೆದ ಗುಂಡಿಗಳನ್ನು ಮುಚ್ಚಿಸಿ</strong></div><div> ಬೆಳ್ಳಂದೂರು ಪೆಟ್ರೋಲ್ ಬಂಕ್ ಸಮೀಪದ ಗ್ರೀನ್ವೆಲ್ ಲೇಔಟ್ ಮಾರ್ಗೊಸ ಅವೆನ್ಯೂ ಅಪಾರ್ಟ್ಮೆಂಟ್ ಬಳಿ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಈ ಗುಂಡಿಗಳನ್ನು ಯಾಕೆ ಮುಚ್ಚುತ್ತಿಲ್ಲ? ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು. </div><div> <strong>–ಬೆಳ್ಳಾವೆ ರಮೇಶ್, ಬೆಳ್ಳಂದೂರು</strong><br /> </div><div> <strong>ನಂ. 258 ಬಿಎನ್ ಬಸ್ಸುಗಳು ಬೇಕು</strong></div><div> ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿ ಒಂದಾದ ‘ಕುವೆಂಪು ನಗರದಿಂದ ನೆಲಮಂಗಲಕ್ಕೆ ಹೋಗುವ ಬಿಎಂಟಿಸಿಯ ಮಾರ್ಗ ಸಂಖ್ಯೆ 258 </div><div> ಬಿಎನ್ ಬಸ್ಸುಗಳಿಂದ ಈ ಮಾರ್ಗದಲ್ಲಿ ಬರುವ ಲಾಲ್ಬಾಗ್, ಕುವೆಂಪುನಗರ, ಕಾರ್ಪೊರೇಶನ್, ಯಶವಂತಪುರ, ದಾಸರಹಳ್ಳಿ, ಮಾಕಳಿ, ನೆಲಮಂಗಲದ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತಿತ್ತು. ಈ ಮಾರ್ಗದ ಬಸ್ಸುಗಳು ಬಿಎಂಟಿಸಿಗೆ ಲಾಭದಾಯಕವೂ ಹೌದು. <br /> </div><div> ಆದರೆ ಈಗ ಕೆಲವು ದಿನಗಳಿಂದ ಮಾರ್ಗ ಸಂಖ್ಯೆ 258 ಬಿಎನ್ ಬಸ್ಸುಗಳು ಅಪರೂಪ ಎಂಬಂತಾಗಿದೆ. ಇದರಿಂದ ಈ ಮಾರ್ಗದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದೆ. ಆದ್ದರಿಂದ ಬಿಎಂಟಿಸಿಯ ಸಂಬಂಧಿಸಿದ ಅಧಿಕಾರಿಗಳು, ಈ ಮೊದಲಿನಂತೆಯೇ ಕುವೆಂಪು ನಗರದಿಂದ ಬೆಳಿಗ್ಗೆ 7–50, 8–30, 9–50, 10–50, 11–50ಕ್ಕೆ ಮಾರ್ಗ ಸಂಖ್ಯೆ 258 ಬಿಎನ್ ಬಸ್ಸುಗಳ ಸಂಚಾರಕ್ಕೆ ಅನುವು </div><div> ಮಾಡಿಕೊಡಬೇಕು.</div><div> <strong>–ಆರ್.ಎನ್.ಎಸ್. ರಾವ್, ಎಂ.ಎಸ್.ರಸ್ತೆ, </strong></div><div> </div><div> <strong>ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಿ</strong><br /> ಐಟಿಪಿಎಲ್ ಮುಖ್ಯರಸ್ತೆಯ ವಾರ್ಡ್ ನಂ 85ರ ಅಣ್ಣಯ್ಯ ಲೇಔಟ್ ರಸ್ತೆಯು ಒಂದು ವರ್ಷದಿಂದ ದುರಸ್ತಿ ಕಾಣದೆ ಸಂಚಾರಕ್ಕೆ ತೊಡಕು ಉಂಟು ಮಾಡಿದೆ. ರಸ್ತೆಯ ಈ ಸ್ಥಿತಿಯಿಂದಾಗಿ ವಾಹನ ಸಂಚಾರಕ್ಕೆ ಹಾಗೂ ಸ್ಥಳೀಯರಿಗೆ ನಡೆದಾಡಲು ತೊಂದರೆಯಾಗಿದೆ.</div><p>ಇನ್ನು ಮಳೆ ಬಂದರೆ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಕೆಸರು ನಿಲ್ಲುತ್ತದೆ. ಹೀಗಾಗಿ ಮಳೆಗಾಲ ಆರಂಭವಾಗುವುದರೊಳಗೆ ಈ ರಸ್ತೆಯನ್ನು ಸರಿಪಡಿಸಬೇಕಾಗಿದೆ.<br /> <strong>ನಾಗರಾಜ ರೆಡ್ಡಿ, ಅಣ್ಣಯ್ಯ ಲೇಔಟ್</strong></p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>