ಪುಟಾಣಿ ಮಕ್ಕಳು ‘ನಮಗೆ ಕಾಂಕ್ರೀಟ್ ಕಾಡು ಬೇಡ, ಹಕ್ಕಿಗಳಿಗೆ ಆಶ್ರಯ ಕೊಡುವ, ಶುದ್ಧ ಆಮ್ಲಜನಕ ನೀಡುವ ಗಿಡಮರ ಬೇಕು’ ಎಂಬ ಸಂದೇಶದ ಚಿತ್ರ ಬಿಡಿಸಿ ಗಮನ ಸೆಳೆದರು.
ಸೀಡ್ ಬಾಲ್ (ಸಸ್ಯ ಬೀಜದ ಚೆಂಡು), ಬೀಜಮಣ್ಣು ತುಂಬಿದ ಚಿಕ್ಕ ಪಾಟ್ ವಿತರಿಸಲಾಯಿತು. ಹಲವು ಪ್ರಭೇದದ ಗಿಡಮರ ಗುರುತಿಸುವ ಬಗ್ಗೆಯೂ ಮರತಜ್ಞ ಗಣೇಶ್ ರಾಮ್ ಅರಿವು ಮೂಡಿಸಿದರು.
ವೇದಿಕೆಯ ಒಂದು ಬದಿಯಲ್ಲಿ ‘ಆಕ್ಸಿಜನ್ ಬಾರ್’ ತೆರೆದು, ಶುದ್ಧ ಆಮ್ಲಜನಕ ಸೇವನೆಗೂ ಅವಕಾಶ ಕಲ್ಪಿಸಲಾಗಿತ್ತು. ಗಿಡಮರ ಉಳಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಇಂತಹ ದುಸ್ಥಿತಿ ಬರುವ ದಿನಗಳು ದೂರವಿಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನೂ ರವಾನಿಸಲಾಯಿತು.