ಬಳಿಕ ಮಾತನಾಡಿದ ಅವರು, ‘ಅವಳಿ ನಗರಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವುದಕ್ಕಾಗಿ ಮೊದಲನೇ ಹಂತದ ಯೋಜನೆ ರೂಪಿಸಿದ್ದೆವು. ಆದರೆ, ಅದರಿಂದ ಎಲ್ಲಾ ಭಾಗಕ್ಕೂ ನೀರು ಒದಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಎರಡನೇ ಹಂತದ ಯೋಜನೆಗೂ ಗುದ್ದಲಿ ಪೂಜೆ ಮಾಡಲಾಗಿದೆ. ಆ ಮೂಲಕ ಈ ಭಾಗದ ನೀರಿನ ಬವಣೆ ನೀಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ’ ಎಂದರು.