ತಪ್ಪು ತಿದ್ದಿದ ಸಂದೇಶ್ ನಾಗರಾಜ್: ‘ಪಾರ್ವತಮ್ಮ ರಾಜ್ಕುಮಾರ್ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯಲ್ಲಿ’ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಸಂತಾಪ ಸೂಚಕ ನಿರ್ಣಯ ಓದುತ್ತಿದ್ದಾಗ, ಅದನ್ನು ಅರ್ಧಕ್ಕೆ ತಡೆದ ಜೆಡಿಎಸ್ನ ಸಂದೇಶ್ ನಾಗರಾಜ್, ‘ಪಾರ್ವತಮ್ಮ ಜನಿಸಿದ್ದು ಚಾಮರಾಜನಗರ ಜಿಲ್ಲೆ ಅಲ್ಲ, ಮೈಸೂರು ಜಿಲ್ಲೆ’ ಎಂದು ಹೇಳಿದರು. ಬಳಿಕ ಶಂಕರಮೂರ್ತಿಯವರು ಮೈಸೂರು ಜಿಲ್ಲೆ ಎಂದು ಸರಿಪಡಿಸಿಕೊಂಡರು.