ಒಂದು ವೇಳೆ ಮಳೆ ಬಂದಲ್ಲಿ, ಇಲ್ಲವೆ ನದಿಗೆ ನೀರು ಪೂರೈಕೆಯಾದಲ್ಲಿ ಮರಳಿಗಾಗಿ ಅಗೆದಿರುವ ದೊಡ್ಡ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಈಜಲು ಹೋಗುವವರು, ಮೀನುಗಾರಿಕೆ ಮಾಡುವ ಬೆಸ್ತರು, ನೀರು ಕುಡಿಯಲು ತೆರಳುವ ಜಾನುವಾರುಗಳ ಪ್ರಾಣಕ್ಕೆ ಕುತ್ತು ಉಂಟಾಗಲಿದೆ. ಇದಲ್ಲದೇ ನದಿಪಾತ್ರದಲ್ಲಿ ಉತ್ತರಾದಿ ಕ್ರಿಯೆಗಳನ್ನು ನಡೆಸುವ ವೇಳೆ ಅವಘಡ ಸಂಭವಿಸುವ ಆತಂಕವೂ ಕಾಡುತ್ತಿದೆ.