ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಕ್‌ ವಿದ್ಯಾರ್ಥಿ ಈಗ ಸನ್ಯಾಸಿ!

Last Updated 8 ಜೂನ್ 2017, 11:47 IST
ಅಕ್ಷರ ಗಾತ್ರ

ಅಹಮದಾಬಾದ್‌: ಈತ 12ನೇ ತರಗತಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿ.  ಪರೀಕ್ಷೆಯಲ್ಲಿ ಗಳಿಸಿದ್ದು ಶೇಕಡ 99.9 ಅಂಕಗಳು. ಆದರೆ, ಈಗ ಎಲ್ಲ ವ್ಯಾಮೋಹಗಳನ್ನು ತೊರೆದು, ದೀಕ್ಷೆ ಪಡೆಯುವ ಮೂಲಕ ಜೈನ ಸನ್ಯಾಸಿಯಾಗಲು ಮುಂದಾಗಿದ್ದಾನೆ.

ಅಹಮದಾಬಾದ್‌ನ ವರ್ಷಿಲ್‌ ಷಾ ಈ ನಿರ್ಧಾರ ಕೈಗೊಂಡಿದ್ದು, ಸನ್ಯಾಸಿಗಳ ಮಾರ್ಗ ತುಳಿಯಲು ನಿರ್ಧರಿಸಿದ್ದಾರೆ.

ವರ್ಷಿಲ್‌ ಅವರ ತಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿ. ಮಗನ ನಿರ್ಧಾರಕ್ಕೆ ತಂದೆ–ತಾಯಿ ಸಹ ಬೆಂಬಲ ನೀಡಿದ್ದಾರೆ.ಎರಡು ವಾರಗಳ ಹಿಂದೆಯಷ್ಟೇ ಗುಜರಾತ್‌ ಪ್ರೌಢ ಶಿಕ್ಷಣ ಮಂಡಳಿ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿತ್ತು. 17 ವರ್ಷದ ವರ್ಷಿಲ್‌ ಸಂತೋಷಕ್ಕೆ ಪಾರವೇ ಇರಲಿಲ್ಲ. ವರ್ಷಿಲ್‌ ಪ್ರಥಮ ಸ್ಥಾನ ಪಡೆದಿದ್ದರು.

ಆದರೆ, ಈಗ ವರ್ಷಿಲ್ ಅವರು ಕೈಗೊಂಡಿರುವ ನಿರ್ಧಾರಕ್ಕೆ ಪೋಷಕರಿಗೆ ಅಚ್ಚರಿಯಾಗಿಲ್ಲ. ಬದಲಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT