ತಪಾಸಣೆ ಆರಂಭ: ಕಲ್ಯಾಣ ಮಂಟಪಗಳಲ್ಲಿ, ಸಭಾಭವನಗಳಲ್ಲಿ, ಹೋಟೆಲ್ಗಳಲ್ಲಿ ಹಾಗೂ ಮದುವೆ ಸಮಾರಂಭಗಳು ನಡೆಯುವ ಇತರೆ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಶಿಷ್ಟಾಚಾರ ಉಲ್ಲಂಘನೆಯಾದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ನೈರ್ಮಲ್ಯ ನಿಗಾ ವಹಿಸಿಕೊಂಡಿರುವ ನೋಡಲ್ ಸಂಸ್ಥೆ ‘ಶುಚಿತ್ವ ಅಭಿಯಾನ’ ಈಗಾಗಲೇ ಪ್ರಾಯೋಗಿಕವಾಗಿ ಕಣ್ಣೂರು, ಎರ್ನಾಕುಲಂ, ಕೊಲ್ಲಂ ಹಾಗೂ ಅಲೆಪ್ಪಿಯಲ್ಲಿ ತಪಾಸಣಾ ಕಾರ್ಯ ಆರಂಭಿಸಿದೆ.