ಮಧ್ಯಾಹ್ನ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾದಾಗ ಸಚಿವರಿಗೆ ಮೀಸಲಾಗಿರುವ ಆಸನಗಳ ಮೊದಲ ಸಾಲಿನಲ್ಲಿ ಯಾವ ಸಚಿವರೂ ಇರಲಿಲ್ಲ. ಇದನ್ನು ಕಂಡ ಬಿಜೆಪಿಯ ಸಿ.ಟಿ. ರವಿ, ‘ಯಾವ ಸಚಿವರೂ ಇಲ್ಲ, ಗ್ಯಾಲರಿಯಲ್ಲಿ ಅಧಿಕಾರಿಗಳು ಇಲ್ಲ. ಯಾರನ್ನು ಉದ್ದೇಶಿಸಿ ಮಾತನಾಡಲಿ’ ಎಂದು ಪ್ರಶ್ನಿಸಿದರು. ‘ನಾವೆಲ್ಲ ಇದ್ದೇವಲ್ಲ’ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು.