ಎಂಬತ್ತರ ದಶಕದ ರೈತ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರು. ಇವರು ಐಐಟಿ ಶಿಕ್ಷಣವನ್ನು ತ್ಯಜಿಸಿ ಹೋರಾಟಕ್ಕಿಳಿದಿದ್ದರು. ಇವರ ಹುಟ್ಟೂರು ನವಲಗುಂದದಲ್ಲಿಯೇ ಇವರದೇ ನೇತೃತ್ವದಲ್ಲಿ ಚಳವಳಿ ಉಗ್ರಸ್ವರೂಪ ಪಡೆದಾಗ ಗೋಲಿಬಾರ್ ನಡೆದು ರೈತರು ಸತ್ತಿದ್ದರು. ಆಗ ರಾಜ್ಯದಾದ್ಯಂತ ಪ್ರತಿಭಟನೆ ನಡೆದಿತ್ತು. ಅದೇ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು.