ದೇಶದಲ್ಲಿ ಮೂಲಸೌಕರ್ಯ, ಕೈಗಾರಿಕಾ ವಲಯದ ಮೇ ತಿಂಗಳ ಪ್ರಗತಿ ಇಳಿಕೆ ಕಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಸಹ ಈ ಬಾರಿ ಬಡ್ಡಿದರ ಕಡಿತ ಆಗುವ ನಿರೀಕ್ಷೆ ವ್ಯಕ್ತಪಡಿಸಿತ್ತು. ಆದರೆ, ಹಣದುಬ್ಬರ ಏರಿಕೆಯ ಕಾರಣ ನೀಡಿ, ಆರ್ಬಿಐ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದು, ಬಡ್ಡಿದರ ಇಳಿಕೆ ಅಗಬಹುದು ಎನ್ನುವ ಹೂಡಿಕೆದಾರರ ಆಶಾವಾದಕ್ಕೆ ತಣ್ಣೀರೆರಚಿದೆ.