ಎಂ.ವಿ. ರೇವಣಸಿದ್ದಯ್ಯ ದತ್ತಿನಿಧಿಯಿಂದ ಸ್ಥಾಪಿಸಿರುವ ‘ನ್ಯಾಯಚೇತನ ರತ್ನ ಪ್ರಶಸ್ತಿ’ಗೆ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ‘ಚಿತ್ರರತ್ನ’ ಪ್ರಶಸ್ತಿಗೆ ಪಂಚಭಾಷೆ ತಾರೆ ಜಯಂತಿ, ‘ಮಾಧ್ಯಮ ರತ್ನ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ, ‘ರಂಗಚೇತನ ರತ್ನ’ ಪ್ರಶಸ್ತಿಗೆ ಸಾಗರದ ಎಂ.ವಿ.ಪ್ರತಿಭಾ ಹಾಗೂ ‘ಸಿಜಿಕೆ ಪ್ರಶಸ್ತಿ’ಗೆ ಪ್ರಸಾಧನ ಕಲಾವಿದ ರಾಮಕೃಷ್ಣ ಬೆಳ್ತೂರು ಅವರನ್ನು ಆಯ್ಕೆ ಮಾಡಲಾಗಿದೆ.