ಲಂಡನ್: ಭಾನುವಾರ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ– ಪಾಕ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿದ್ದು, ಉಭಯ ತಂಡಗಳಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ.ಡಿವಿಲಿಯರ್ಸ್ ಶುಭ ಕೋರಿದ್ದಾರೆ.
‘ಐಪಿಎಲ್ನ ಆರು ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ತಂಡದಲ್ಲಿ ನಾನು ಹಲವು ಪಂದ್ಯಗಳನ್ನುಆಡಿದ್ದೇನೆ. ಮೈದಾನದಲ್ಲಿ ತಂಡದ ಮೇಲಿನ ಒತ್ತಡವನ್ನು ಹೇಗೆ ನಿವಾರಿಸಬೇಕು ಎಂಬುದರ ಬಗ್ಗೆ ಕೊಹ್ಲಿಗೆ ಅರಿವಿದೆ. ಜತೆಗೆ ಮೈದಾನದಲ್ಲಿ ಇರುವಷ್ಟು ಸಮಯ ಒಬ್ಬ ಸರ್ಜನ್ರಂತೆ ಕೆಲಸ ಮಾಡುತ್ತಾರೆ’ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
‘ವಿರಾಟ್ ಕೊಹ್ಲಿಗೆ ಸರಿಯಾದ ಸಮಯದಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಏರುವ ಜತೆಗೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಕಲೆ ಕರಗತವಾಗಿದೆ’ ಎಂದಿದ್ದಾರೆ.