ಮೈಸೂರು: ‘ದೇಶದಲ್ಲಿ ಕೆಲವೊಂದು ಕಾನೂನುಗಳು ಜಾರಿಯಾಗುವ ಮುನ್ನವೇ ತಿದ್ದುಪಡಿಗೆ ಒಳಗಾಗುತ್ತಿರುವುದು ದುರದೃಷ್ಟಕರ’ ಎಂದು ಕರ್ನಾಟಕ ಹೈಕೋರ್ಟ್ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಇಲ್ಲಿ ಶನಿವಾರ ಅಭಿಪ್ರಾಯಪಟ್ಟರು.
ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಸಿವಿಲ್ ಪ್ರಕ್ರಿಯಾ ಸಂಹಿತೆಯನ್ನು ಮೊದಲ ಬಾರಿ 1882ರಲ್ಲಿ ಜಾರಿಗೆ ತರಲಾಯಿತು.
1885ರಲ್ಲಿ ಈ ಕಾಯ್ದೆಯಲ್ಲಿ ತಿದ್ದುಪಡಿ ನಡೆಯಿತು. 1908ರಲ್ಲಿ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸಲಾಯಿತು. 1976ರಲ್ಲಿ ಮತ್ತೆ ತಿದ್ದುಪಡಿ ತಂದು 1977ರ ಫೆ. 2ರಂದು ಜಾರಿಗೊಳಿಸಲಾಯಿತು. 1882ರ ಆಸ್ತಿ ವರ್ಗಾವಣೆ ಕಾಯ್ದೆಯು ಇದೇ ರೀತಿ ತಿದ್ದುಪಡಿಗೆ ಒಳಗಾಗಿದೆ ಎಂದರು.