ಜೈಲು ಶಿಕ್ಷೆ; ಎಚ್ಚರಿಕೆ: ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸರಕುಗಳ ಮೇಲೆ ಹೊಸ ಜಿಎಸ್ಟಿ ದರ ಮುದ್ರಿಸದಿದ್ದರೆ ₹ 1 ಲಕ್ಷದವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ‘ಗ್ರಾಹಕರ ದೂರುಗಳಿಗೆ ಸ್ಪಂದಿಸಲು ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಗ್ರಾಹಕರ ವ್ಯವಹಾರಗಳ ಸಚಿವ ರಾಂ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಹೊಸ ಎಂಆರ್ಪಿ ಅಡಿ, ಹಳೆಯ ದಾಸ್ತಾನನ್ನು ಮೂರು ತಿಂಗಳಲ್ಲಿ ಮಾರಾಟ ಮಾಡಲು ಸರ್ಕಾರ ವರ್ತಕರಿಗೆ ಅನುಮತಿ ನೀಡಿದೆ.