ಅರ್ಜಿ ಸ್ವೀಕರಿಸಿದ ಹುಡ್ಕೊದ ಕೇಂದ್ರ ಸಾರ್ವಜನಿಕ ಮಾಹಿತಿ ಕಚೇರಿ ಅಧಿಕಾರಿ, ‘ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಮಾಹಿತಿ ಒದಗಿಸಲು ಅವಕಾಶವಿಲ್ಲ. ಈ ಮಾಹಿತಿ ತಮಗೆ ವೈಯಕ್ತಿಕವಾಗಿ, ಸಾಮಾಜಿಕ ಅಥವಾ ರಾಷ್ಟ್ರೀಯವಾಗಿ ಉಪಯೋಗವಾಗುತ್ತದೆಯೇ’ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.
ಈ ಬೆಳವಣಿಗೆಯನ್ನು ಗಮನಿಸಿದ ಮಾಹಿತಿ ಆಯುಕ್ತರು, ‘ಈ ಪ್ರಕರಣದಲ್ಲಿ ಹುಡ್ಕೊ ಅಧಿಕಾರಿಯ ಆರ್ಟಿಐ ವಿರೋಧಿ ಮನಸ್ಥಿತಿಯನ್ನು ನೋಡಿದರೆ ಉಡುಗೊರೆ ಖರೀದಿ ಮತ್ತು ಮನೆ–ಕಚೇರಿಗಾಗಿ ಸಾರ್ವಜನಿಕ ಹಣವನ್ನು ದೊಡ್ಡ ಪ್ರಮಾಣದಲ್ಲಿ ವ್ಯಯಿಸಿದ ಹಗರಣವೇ ನಡೆದಿದೆ ಎಂಬ ಅನುಮಾನ ಉಂಟಾಗುತ್ತಿದೆ. ಆದ್ದರಿಂದ ಮಾಹಿತಿ ಕೊಡುವುದಕ್ಕೆ ಕುಂಟು ನೆಪ ಹೇಳಿ ಸಮಯ ದೂಡಲಾಗುತ್ತಿದೆ’ ಎಂದಿದ್ದಾರೆ. ಈ ಸಂಬಂಧ ಹುಡ್ಕೊದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆಯುಕ್ತರು ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ಆದೇಶದ ಪ್ರತಿಯನ್ನು ನಗರಾಭಿವೃದ್ಧಿ ಸಚಿವ ರಾವ್ ಇಂದ್ರಜಿತ್ ಸಿಂಗ್, ಕಾರ್ಯದರ್ಶಿ ನಂದಿತಾ ಚಟರ್ಜಿಗೂ ಕಳುಹಿಸಿದ್ದಾರೆ.