ಆಶೀರ್ವಚನ ನೀಡಿದ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ‘ಪ್ರಸಕ್ತ ಆಗುತ್ತಿರುವ ಬದಲಾವಣೆಗಳಿಗೆ ಪೂರಕವಾಗಿ ಶಾಲೆಗೆ ಕಾಯಕಲ್ಪ ನೀಡಲಾಗುತ್ತಿದೆ. ದೇಗುಲ, ಮಸೀದಿ ಚರ್ಚ್ ಜೀಣೋದ್ಧಾರಕ್ಕೆ ಭಕ್ತರು ಸಹಾಯ ಮಾಡಲು ಒಂದಾಗುತ್ತಾರೋ, ಅಂತಯೇ ಪ್ರತಿಯೊಂದು ಶಾಲೆಗಳ ನಿರ್ಮಾಣಕ್ಕೆ ದೇಶ,ವಿದೇಶಗಳಲ್ಲಿರುವ ಸ್ಥಳೀಯರು ಒಂದಾಗಬೇಕು’ ಎಂದರು.