‘ಹವಾಮಾನ ಇಲಾಖೆಯ ಪುಣೆ ಮತ್ತು ಕೊಲಬಾ ಕೇಂದ್ರಗಳ ಅಧಿಕಾರಿಗಳು, ‘ಜೂನ್–ಜುಲೈನಲ್ಲಿ ವಾಡಿಕೆ ಮಳೆಯಾಗುತ್ತದೆ’ ಎಂದು ಮುನ್ಸೂಚನೆ ನೀಡಿದ್ದರು. ಅದನ್ನು ನಂಬಿಕೊಂಡು ಇಲ್ಲಿನ ರೈತರು ಉಳುಮೆ ಕಾರ್ಯ ಮುಗಿಸಿದ್ದಾರೆ. ಬಹುತೇಕರು, ಗೊಬ್ಬರವನ್ನೂ ಹಾಕಿ, ಬಿತ್ತನೆಯನ್ನೂ ಮುಗಿಸಿದ್ದಾರೆ. ಆದರೆ, ಆರಂಭದ ಒಂದೆರಡು ದಿನ ಸಣ್ಣ ಮಳೆ ಬಂದದ್ದು ಬಿಟ್ಟರೆ ಮಳೆಯ ವಾತಾವರಣವೇ ಇಲ್ಲ. ಇಲಾಖೆಯ ಅಧಿಕಾರಿಗಳು ಬೀಜ ಮತ್ತು ಗೊಬ್ಬರ ತಯಾರಕರ ಜತೆ ಕೈಜೋಡಿಸಿ, ನಮ್ಮನ್ನು ವಂಚಿಸಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ರೈತರು ದೂರಿನಲ್ಲಿ ಕೋರಿದ್ದಾರೆ.