ಈ ಕುರಿತು ಪ್ರತಿಕ್ರಿಯಿಸಿದ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನೀಡಿದ ಸೀರೆಯನ್ನು ಉತ್ಸವಮೂರ್ತಿಗೆ ತೊಡಿಸಿ ಮೇಯರ್ ನೀಡಿದ ಸೀರೆಯನ್ನು ಭುಜದ ಮೇಲೆ ಹಾಕಿದೆವು. ಪಕ್ಕದಲ್ಲಿದ್ದ ಮಹಿಷಾಸುರ ಮರ್ದಿನಿ ವಿಗ್ರಹ ಕಾಣಲಿ ಎಂದು ಅರಮನೆಯಲ್ಲಿ ಒಂದು ಸೀರೆಯನ್ನು ತುಸು ಬದಿಗೆ ಸರಿಸಿದ್ದಾರೆ ಅಷ್ಟೆ’ ಎಂದು ಹೇಳಿದರು.