ರಾಮ್ ರಹೀಮ್ ಬಂಧನದ ನಂತರ ಪಂಚಕುಲಾದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಕನಿಷ್ಠ 41 ಜನ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು. ಘಟನೆ ಹಿಂದೆ ಹನಿಪ್ರೀತ್ ಕೈವಾಡವೂ ಇದೆ ಎಂಬ ಆರೋಪ ದಾಖಲಾಗಿತ್ತು. ಆಕೆಯ ವಿರುದ್ಧ ದೆಹಲಿಯ ನ್ಯಾಯಾಲಯ ಬಂಧನದ ವಾರೆಂಟ್ ಅನ್ನೂ ಜಾರಿ ಮಾಡಿತ್ತು. ಆದರೆ, ಆಕೆ ತಲೆಮರೆಸಿಕೊಂಡಿದ್ದಳು. ಅಲ್ಲದೆ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ, ನ್ಯಾಯಾಲಯ ಇದನ್ನು ತಿರಸ್ಕರಿಸಿತ್ತು.