ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಬಿಜೆಪಿ ಕೌನ್ಸಿಲರ್‌ನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಸ್ಥಳೀಯರು

Last Updated 4 ಅಕ್ಟೋಬರ್ 2017, 11:12 IST
ಅಕ್ಷರ ಗಾತ್ರ

ವಡೋದರಾ: ಯಾವುದೇ ನೋಟಿಸ್ ನೀಡದೆ ಕೊಳೆಗೇರಿಯ ಮನೆಗಳನ್ನು ನೆಲಸಮಗೊಳಿಸಲು ಮುಂದಾದ ಬಿಜೆಪಿ ಕೌನ್ಸಿಲರ್ ಅವರ ವರ್ತನೆಯಿಂದ ಕೋಪಗೊಂಡ ನಿವಾಸಿಗಳು ಬಿಜೆಪಿ ಕೌನ್ಸಿಲರ್ ಹಶ್ಮುಕ್ ಪಟೇಲ್ ಅವರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ.

ಈಗಾಗಲೇ 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕೌನ್ಸಿಲರ್ ಹಶ್ಮುಕ್ ಪಟೇಲ್ ಅವರು ಸ್ಥಳಕ್ಕೆ ಬಂದ ತಕ್ಷಣ ಅವರ ಸುತ್ತಮುತ್ತ ನಿವಾಸಿಗಳು ಗುಂಪುಗೂಡಿದ್ದಾರೆ. ಬಳಿಕ ನೋಟಿಸ್ ನೀಡದೆ ಹೇಗೆ ತೆರವುಗೊಳಿಸುವಿರಿ ಎಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಹಶ್ಮುಖ್ ಅವರ ಶರ್ಟ್ ಹರಿದುಹೋಗಿದೆ. ಇವೆಲ್ಲವೂ ವಿಡಿಯೋದಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT