ಪಿರಿಯಾಪಟ್ಟಣ ಡಿಪೊದಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿರುವ ಶಿವಾಜಿ ಬಂಧಿತರು. ಪಿರಿಯಾಪಟ್ಟಣ– ಬೆಟ್ಟದಪುರ ಮಾರ್ಗದ ಬಸ್ಸಿನಲ್ಲಿ ನಿರ್ವಾಹಕರಾಗಿರುವ ಅವರು, ಬಸ್ಸಿನಲ್ಲಿ ಹಾಕಿದ್ದ ರಾಜ್ಯ ಸರ್ಕಾರದ ಪೋಸ್ಟರ್ ಹರಿದು ಹಾಕುತ್ತಿದ್ದುದನ್ನು ಕಂಡು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅವರನ್ನೇ ಶಿವಾಜಿ ನಿಂದಿಸಿದ್ದಾರೆ. ಬಳಿಕ ಕಾಂಗ್ರೆಸ್ ಮುಖಂಡರಿಗೆ ಸಾರ್ವಜನಿಕರು ವಿಷಯ ತಿಳಿಸಿದರು. ಈ ಮಾಹಿತಿ ಮೇರೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣೇಗೌಡ, ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.