ನಾಲ್ಕೈದು ದಿನಗಳ ಹಿಂದೆಯೇ ತಾಲ್ಲೂಕಿನ ಅರಣ್ಯ ಗಡಿಭಾಗದ ಗುಂಜಾವತಿ ಅರಣ್ಯವನ್ನು ಪ್ರವೇಶಿಸಿರುವ ಕಾಡಾನೆಗಳ ಹಿಂಡು, ಅರಣ್ಯದಂಚಿನ ಭತ್ತದ ಗದ್ದೆಗಳಲ್ಲಿ ಸಂಚರಿಸಿವೆ. ಅರಣ್ಯದ ಮಧ್ಯಭಾಗದಲ್ಲಿರುವ ಮೂಕನಕಟ್ಟೆ ಕೆರೆಗೆ ನೀರು ಕುಡಿಯಲು ಬಂದಿರುವಾಗ ಕೆರೆಯಲ್ಲಿ ಬಿದ್ದಿರಬಹುದು. ಇಲ್ಲವೇ ಕಾಡಾನೆಗಳ ಜಗಳದಲ್ಲಿ ಗಾಯಗೊಂಡು ನೀರಿನಿಂದ ಮೇಲಕ್ಕೇಳದೆ ಮೃತಪಟ್ಟಿರಬಹುದೆಂದು ಅರಣ್ಯ ಅಧಿಕಾರಿ ಶಂಕಿಸಿದ್ದಾರೆ.