ಮುಂಜಾನೆಯಿಂದಲೇ ತುಸು ಮಂಜಿನಿಂದ ಕವಿದಿದ್ದ ಮಲೆನಾಡ ಪರಿಸರ ಈ ಮಣ್ಣಿನ ಹಬ್ಬದಿಂದಾಗಿ ಉಲ್ಲಸಿತಗೊಂಡಿತ್ತು. ರಾತ್ರಿಯಿಡೀ ನಿದ್ದೆ ಬಿಟ್ಟು ತಯಾರಿಸಿದ ಎಲೆಗಡುಬು, ಅಮಟೆ ಕಾಯಿ ಪಲ್ಯ, ಅತ್ರಾಸ, ಸೀಖೆದುಂಡೆ, ಹೋಳಿಗೆ, ಕಜ್ಜಾಯ, ವಿವಿಧ ಸೊಪ್ಪುಗಳಿಂದ ತಯಾರಿಸಿದ ಪದಾರ್ಥಗಳನ್ನು ಪರಸ್ಪರ ಸೌಹಾರ್ದ ಭಾವದಿಂದ ನೆರೆಹೊರೆಯವರು ಫಸಲಿನ ನಡುವೆ ಹಂಚಿ ತಿನ್ನುತಿದ್ದ ದೃಶ್ಯ ಕಂಡು ಬಂತು.