ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಗೆ ಬಿದ್ದು ವೃದ್ಧ, ಇಬ್ಬರು ಮಕ್ಕಳ ಸಾವು

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಆಯತಪ್ಪಿ ಬಾವಿಗೆ ಬಿದ್ದ ಇಬ್ಬರು ಮೊಮ್ಮಕ್ಕಳ ರಕ್ಷಣೆಗೆ ಧಾವಿಸಿದ ವೃದ್ಧರೊಬ್ಬರು ಸೇರಿದಂತೆ ಮೂವರು ಶುಕ್ರವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹಣ್ಣಿಕೇರಿಯ ಶ್ರೀಶೈಲ ಚರಂತಿಮಠ (67), ಅವರ ಮೊಮ್ಮಕ್ಕಳಾದ ಸೋಮಯ್ಯ ಹಿರೇಮಠ (12) ಹಾಗೂ ಸಮರ್ಥ ಹಿರೇಮಠ ಸಾವಿಗೀಡಾದವರು.

ಸವದತ್ತಿ ತಾಲ್ಲೂಕಿನ ಅಸುಂಡಿಯಲ್ಲಿ ವಾಸವಾಗಿದ್ದ ಈ ಮಕ್ಕಳು, ಸೀಗಿ ಹುಣ್ಣಿಮೆ ನಿಮಿತ್ತ ಗುರುವಾರ ಅಜ್ಜನ ಮನೆಗೆ ಬಂದಿದ್ದರು. ಶುಕ್ರವಾರ ಸ್ನಾನ ಮಾಡ
ಲೆಂದು ತೋಟದ ಬಾವಿಗೆ ತೆರಳಿದ್ದರು. ಬಾವಿ ದಂಡೆಯಲ್ಲಿದ್ದ ಮಕ್ಕಳು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಆಗ ಇವರ ರಕ್ಷಣೆಗೆ ಮುಂದಾದ ಅಜ್ಜ ಶ್ರೀಶೈಲ ಅವರೂ ಕೂಡಲೇ ಬಾವಿಗೆ ಹಾರಿದ್ದಾರೆ. ಆದರೆ ಮೇಲಕ್ಕೆ ಬಾರಲು ಆಗದೇ ಮೂವರೂ ಮುಳುಗಿದ್ದಾರೆ.

ಶವಗಳನ್ನು ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ಹೊರತೆಗೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT