ಸವದತ್ತಿ ತಾಲ್ಲೂಕಿನ ಅಸುಂಡಿಯಲ್ಲಿ ವಾಸವಾಗಿದ್ದ ಈ ಮಕ್ಕಳು, ಸೀಗಿ ಹುಣ್ಣಿಮೆ ನಿಮಿತ್ತ ಗುರುವಾರ ಅಜ್ಜನ ಮನೆಗೆ ಬಂದಿದ್ದರು. ಶುಕ್ರವಾರ ಸ್ನಾನ ಮಾಡ
ಲೆಂದು ತೋಟದ ಬಾವಿಗೆ ತೆರಳಿದ್ದರು. ಬಾವಿ ದಂಡೆಯಲ್ಲಿದ್ದ ಮಕ್ಕಳು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಆಗ ಇವರ ರಕ್ಷಣೆಗೆ ಮುಂದಾದ ಅಜ್ಜ ಶ್ರೀಶೈಲ ಅವರೂ ಕೂಡಲೇ ಬಾವಿಗೆ ಹಾರಿದ್ದಾರೆ. ಆದರೆ ಮೇಲಕ್ಕೆ ಬಾರಲು ಆಗದೇ ಮೂವರೂ ಮುಳುಗಿದ್ದಾರೆ.