2012ರ ಸೆ. 1ರಂದು ಬಸವರಾಜಪುರದ ಹೊರವಲಯದ ನಿರ್ಜನ ಪ್ರದೇಶದಲ್ಲಿ 17 ವರ್ಷದ ಬಾಲಕಿಯು ತನ್ನ ಪ್ರಿಯತಮನೊಂದಿಗೆ ಕುಳಿತಿದ್ದಳು. ಇಲ್ಲಿಗೆ ಹೋದ ಚೇತನ್, ವಸಂತ್, ಬೇರೆ ಜಾತಿಗೆ ಸೇರಿದ್ದ ಪ್ರೇಮಿಗಳನ್ನು ಪ್ರಶ್ನಿಸಿದ್ದರು. ಸ್ನೇಹಿತರಿಗೆ ದೂರವಾಣಿ ಕರೆ ಮಾಡಲು ಯತ್ನಿಸಿದ ಪ್ರಿಯತಮನ ಮೊಬೈಲ್ ಫೋನ್ ಕಿತ್ತುಕೊಂಡು ಹಲ್ಲೆ ನಡೆಸಲು ಯತ್ನಿಸಿದ್ದರು. ಬಾಲಕಿ ಹಾಗೂ ದ್ವಿಚಕ್ರ ವಾಹನ ಬಿಟ್ಟು ಪ್ರಿಯತಮ ಪರಾರಿಯಾಗಿದ್ದನು.