ಶನಿವಾರ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಕುಂದೂರು ವ್ಯಾಪ್ತಿಯ ಸಿಂಗಟಗೆರೆ, ತರಗನಹಳ್ಳಿ, ಬೇವಿನಹಳ್ಳಿ, ಮತ್ತಿತರೆ ಗ್ರಾಮಗಳು, ನ್ಯಾಮತಿ ವ್ಯಾಪ್ತಿಯ ಕೆಂಚಿಕೊಪ್ಪ, ಮಾದೇನಹಳ್ಳಿ ಮತ್ತಿತರೆ ಗ್ರಾಮಗಳಲ್ಲಿ ಸೈನಿಕ ಹುಳುಗಳ ಹಾವಳಿ ಹೆಚ್ಚಾಗಿದ್ದು, ಇವು ಒಂದೇ ದಿನದಲ್ಲಿ ಭಾಗಶಃ ಬೆಳೆಗಳನ್ನು ತಿಂದು ಮುಗಿಸುವಷ್ಟು ಸಾಮರ್ಥ್ಯ ಹೊಂದಿವೆ ಎಂದರು.