ಮಾರ್ಚ್ ಅಂತ್ಯದ ಒಳಗೆ ಈ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ಅಭಿವೃದ್ಧಿ ಯೋಜನೆಯ ಶಿವಮೊಗ್ಗ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್, ಸಹಾಯಕ ಅಭಿಯಂತರ ಸಂಗಮೇಶ, ಅಧೀಕ್ಷಕ ರವಿಕುಮಾರ್, ತಾಲ್ಲೂಕು ಪಂಚಾಯ್ತಿ ಸದಸ್ಯ ಎನ್.ಚಂದ್ರೇಶ, ಎಪಿಎಂಸಿ ನಿರ್ದೇಶಕ ಈಶ್ವರಪ್ಪ ಹಾರೋಹಿತ್ಲು, ಗ್ರಾಮ ಪಂಚಾಯ್ತಿ ಸದಸ್ಯ ಮಧು ಸೂದನ್, ಪಿಡಿಒ ಚಂದ್ರಶೇಖರ್ ಹಾಜರಿದ್ದರು.