ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರವೇರಿ ಕುಳಿತ ಯುವಕ

Last Updated 9 ಅಕ್ಟೋಬರ್ 2017, 5:26 IST
ಅಕ್ಷರ ಗಾತ್ರ

ಕೂಡ್ಲಿಗಿ: ಮದುವೆ ಮಾಡಿಸುವಂತೆ 2 ವರ್ಷದಿಂದ ಕೇಳಿದರೂ ಮನೆಯವರು ನನ್ನ ಮಾತು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಮುನಿಸಿಕೊಂಡ ಯುವಕನೊಬ್ಬ ಮರವೇರಿ ಕುಳಿತ ಪ್ರಸಂಗ ತಾಲ್ಲೂಕಿನ ಯಂಬಳಿ ವಡ್ಡರಹಟ್ಟಿಯಲ್ಲಿ ನಡೆದಿದೆ.

ಬಸವರಾಜ(32) ಮರವೇರಿ ಕುಳಿತ ಯುವಕ. ಗ್ರಾಮದಲ್ಲಿರುವ ಬೇವಿನ ಮರವೇರಿ ಕುಳಿತಿರುವ ಬಸವರಾಜ ತನಗೆ ಮದುವೆ ಮಾಡುವುದಾಗಿ ಭರವಸೆ ನೀಡಿದರೆ ಮಾತ್ರ ಕೇಳಿಗಿಳಿದು ಬರುತ್ತೇನೆ ಎಂದು ಹಠ ಹಿಡಿದ್ದಿದ್ದರು. ಗ್ರಾಮದ ಮುಖಂಡರು ಎಷ್ಟೇ ಹೇಳಿದರೂ ಬಸವರಾಜ ಕೇಳಿಗಿಳಿದು ಬಾರದೆ 30 ತಾಸುಗಳಿಂದ ಮರದಲ್ಲಿಯೇ ಕುಳಿತಿದ್ದರು.

ಗ್ರಾಮಸ್ಥರು ಕಾನ ಹೊಸಹಳ್ಳಿ ಪೊಲೀಸರಿಗೆ ಈ ಸಂಬಂಧ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪಿಎಸ್‌ಐ ಕೃಷ್ಣನಾಯ್ಕ್ ಹಾಗೂ ಸಿಬ್ಬಂದಿ ಯುವಕನನ್ನು ಮರದಿಂದ ಕೆಳಗಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT