ಅಂದಹಾಗೆ, ಈ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಏನು? ಒಂದೆರಡು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರಾ ‘ಕಿಚ್ಚ’? ಎಂಬ ಪ್ರಶ್ನೆಗೆ, ಇಲ್ಲ, ಹಾಗೇನೂ ಇಲ್ಲ. ಸಿನಿಮಾದ ಬಹುಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ ಎಂದು ಹೇಳಿದೆ ಚಿತ್ರತಂಡ. ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗನೊಬ್ಬ ನಗರ ಜೀವನದಲ್ಲಿ ಅನುಭವಿಸುವ ಕೀಳರಿಮೆಗಳ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಅದರಲ್ಲಿ ಸುದೀಪ್ ಅವರು ರಾಜುಗೆ ಧೈರ್ಯ ತುಂಬುವ ಪಾತ್ರವೊಂದನ್ನು ನಿಭಾಯಿಸಿದ್ದಾರಂತೆ. ಈ ಎಲ್ಲ ವಿವರಗಳನ್ನು ಕೊಟ್ಟವರು ಸಿನಿಮಾ ನಿರ್ದೇಶಕ ನರೇಶ್ ಕುಮಾರ್.