‘ಗೌರಿ ಲಂಕೇಶ್ ಹತ್ಯೆ ಬಗ್ಗೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಗುಹಾ, ‘ವಿಚಾರವಾದಿಗಳಾದ ದಾಭೋಲ್ಕರ್, ಪಾನ್ಸರೆ ಹಾಗೂ ಕಲಬುರ್ಗಿ ಅವರನ್ನು ಕೊಂದ ಸಂಘ ಪರಿವಾರದವರೇ ಗೌರಿ ಅವರನ್ನೂ ಹತ್ಯೆಗೈದಿದ್ದಾರೆ’ ಎಂದು ಹೇಳಿದ್ದರು. ಈ ಎಲ್ಲ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. ಹೀಗಿರುವಾಗ, ಸಂಘ ಪರಿವಾರದವರ ಮೇಲೆ ಆರೋಪ ಮಾಡುವ ಮೂಲಕ ಗುಹಾ ನಮಗೆ ಅವಮಾನ ಮಾಡಿದ್ದಾರೆ’ ಎಂದು ಬಿಜೆಪಿ ಸದಸ್ಯರು ದೂರಿದ್ದಾರೆ.