ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಡಿಜಿಪಿ ರೂಪ್ ಕುಮಾರ್ ದತ್ತ, ‘ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿ, ವಾಹನ ಚಲಾಯಿಸಿದಾಗ ಅಪಘಾತ ತಡೆಗಟ್ಟಬಹುದು. ಅಪಘಾತ ತಡೆಗಾಗಿ ರೂಪಿಸಿರುವ ತಾಂತ್ರಿಕ ವಿಭಾಗ, ಕಾನೂನು ಅರಿವು ಅನುಷ್ಠಾನ ಮಂಡಳಿ ಹಾಗೂ ರಸ್ತೆ ಸುರಕ್ಷತೆಯ ಜಾಗೃತಿ ಶಿಕ್ಷಣ ವಿಭಾಗವು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಅಪಘಾತ ಪ್ರಮಾಣ ಗಣನೀಯವಾಗಿ ತಗ್ಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.