‘ಡ್ಯಾಂ ಕೆಳಭಾಗದಲ್ಲಿ ನಿಂತು ಸ್ನೇಹಿತರೆಲ್ಲ ಮೀನು ಹಿಡಿಯುತ್ತಿದ್ದರು. ಮಳೆಯಿಂದಾಗಿ ಡ್ಯಾಂನಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿತ್ತು. ಅದನ್ನು ಸ್ನೇಹಿತರ್ಯಾರೂ ಗಮನಿಸಿರಲಿಲ್ಲ. ಕೆಲ ನಿಮಿಷದಲ್ಲಿ ಆ ನೀರಿನ ರಭಸಕ್ಕೆ ನಾಲ್ವರೂ ಸ್ನೇಹಿತರು ಕೊಚ್ಚಿಹೋಗಿದ್ದರು. ಅವರಲ್ಲಿ ಮೂವರು ಅಪಾಯದಿಂದ ಪಾರಾಗಿ ದಡಕ್ಕೆ ಬಂದಿದ್ದರು. ಆದರೆ, ಸಂತೋಷ್ ವಾಪಸ್ ಬಂದಿರಲಿಲ್ಲ. ಸ್ನೇಹಿತರು ಎಷ್ಟೇ ಹುಡುಕಾಡಿದರೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ’ ಎಂದು ಕಗ್ಗಲೀಪುರ ಠಾಣೆಯ ಪೊಲೀಸರು ತಿಳಿಸಿದರು.