ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕರ ಕಲ್ಯಾಣಕ್ಕಿರುವ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲು ಮುಂದಾಗಿದ್ದಾರೆ. ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡುವುದು, ಕಾರ್ಮಿಕರಿಗೆ ಎಲ್ಪಿಜಿ ಸಿಲೆಂಡರ್ ಪೂರೈಕೆ, ಸ್ಮಾರ್ಟ್ ಫೋನ್ ವಿತರಣೆ ಇದರಲ್ಲಿ ಸೇರಿವೆ’ ಎಂದರು.