ನೆಲಮಂಗಲದಿಂದ ಹಾಸನ ಕಡೆಗೆ ಹೊರಟಿದ್ದ ಸ್ಕಾರ್ಪಿಯೊ ಚಾಲಕನ ನಿಯಂತ್ರಣ ತಪ್ಪಿ ತಂಗುದಾಣದ ಕಡೆ ನುಗ್ಗಿ ಅಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಹಾಲಿ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ವಾಸವಿದ್ದ, ಕುಣಿಗಲ್ ತಾಲ್ಲೂಕಿನ ಜಡೇಮಾಯಸಂದ್ರ ಬಳಿಯ ಮುತ್ತುಗನಹಳ್ಳಿ ಗ್ರಾಮದವರಾದ ಕೆಂಪರಾಜು (40) ಪತ್ನಿ ಮಮತಾ (35) ಅವರ ಮಕ್ಕಳಾದ ಸುಮಾ (10) ಹಾಗೂ ಸಂಜಯ್ (02) ಮೃತಪಟ್ಟರು.