ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಐದು ಮಂದಿ ಸಾವು

Last Updated 19 ಅಕ್ಟೋಬರ್ 2017, 14:42 IST
ಅಕ್ಷರ ಗಾತ್ರ

ರಾಮನಗರ: ರಸ್ತೆ ಪಕ್ಕದ ತಂಗುದಾಣದ ಬಳಿ ನಿಂತಿದ್ದವರಿಗೆ ಕಾರ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐದು ಜನ ಮೃತಪಟ್ಟಿದ್ದಾರೆ.

ಮಾಗಡಿ ತಾಲ್ಲೂಕಿನ ಸಾಹುಕಾರನ ಪಾಳ್ಯ ಬಳಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಸಂಜೆ 5.30ರ‌ ಸುಮಾರಿಗೆ ಈ ದುರ್ಘಟನೆ ಸಂಭವಿಸಿತು.

ನೆಲಮಂಗಲದಿಂದ ಹಾಸನ ಕಡೆಗೆ ಹೊರಟಿದ್ದ ಸ್ಕಾರ್ಪಿಯೊ ಚಾಲಕನ ನಿಯಂತ್ರಣ ತಪ್ಪಿ ತಂಗುದಾಣದ ಕಡೆ ನುಗ್ಗಿ ಅಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಹಾಲಿ ಬೆಂಗಳೂರಿ‌ನ ಹೆಗ್ಗನಹಳ್ಳಿಯಲ್ಲಿ ವಾಸವಿದ್ದ, ಕುಣಿಗಲ್ ತಾಲ್ಲೂಕಿನ ಜಡೇಮಾಯಸಂದ್ರ ಬಳಿಯ ಮುತ್ತುಗನಹಳ್ಳಿ  ಗ್ರಾಮದವರಾದ ಕೆಂಪರಾಜು (40) ಪತ್ನಿ ಮಮತಾ (35) ಅವರ ಮಕ್ಕಳಾದ ಸುಮಾ (10) ಹಾಗೂ ಸಂಜಯ್ (02) ಮೃತಪಟ್ಟರು.

ಕಾರಿನ ಚಾಲಕ ನವನೀತ್ (24) ಸಹ ಸಾವನ್ನಪಿದರು ಎಂದು ತಿಳಿದುಬಂದಿದೆ. ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT