‘ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಬಿಜೆಪಿ, ಸಂಘ ಪರಿವಾರದ ಭದ್ರಕೋಟೆಗಳಾಗಿವೆ. ಆ ಜಿಲ್ಲೆಗಳಲ್ಲಿರುವ ಕಾರ್ಯಕರ್ತರಲ್ಲಿ ಹುರುಪು ತುಂಬಲು ಪಕ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಪಕ್ಷದ ಸಮಾವೇಶಗಳಲ್ಲಿ ರಾಹುಲ್ ಭಾಗವಹಿಸುವುದರಿಂದ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಚುರುಕುಗೊಳಿಸಬಹುದು ಎನ್ನುವುದು ನಾಯಕರ ನಿರೀಕ್ಷೆ’ ಎಂದೂ ಮೂಲಗಳು ತಿಳಿಸಿವೆ.